ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಗೋಡು ತಿಮ್ಮಪ್ಪ ವಿರುದ್ಧ ಕೆಂಡ ಕಾರಿದ ಸಿಟಿ ರವಿ

By Staff
|
Google Oneindia Kannada News

CT Ravi
ಹಾಸನ, ಏ. 7 : ಹಿಂದುತ್ವದ ಬಗ್ಗೆ ಮಾತನಾಡುವವರ ಕೈ ಕಡಿಯಿರಿ ಎಂದು ಹೇಳುವವರು ಕೈ ಕಡಿಯಲು ಮುಂದಾದರೆ ಅವರ ತಿಥಿಯಾಗುತ್ತದೆ ಎಂದು ಬಿಜೆಪಿ ಶಾಸಕ ಸಿ ಟಿ ರವಿ ಎಚ್ಚರಿಕೆ ನೀಡಿದರು. ಹಿಂದುತ್ವದ ಬಗ್ಗೆ ಮಾತನಾಡುವವರ ಕೈ ಕಡಿಯಿರಿ ಎಂದು ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ನೀಡಿರುವ ಹೇಳಿಕೆಗೆ ಅತ್ಯಂತ ಖಂಡನೀಯ ಎಂದು ರವಿ ಆಕ್ರೋಶ ವ್ಯಕ್ತಪಡಿಸಿದರು.

ಭಾರತವು ಬಹುಸಂಖ್ಯಾತ ಹಿಂದೂಗಳಿರುವ ರಾಷ್ಟ್ರ. ಈ ರಾಷ್ಟ್ರದಲ್ಲಿ ಹಿಂದುತ್ವ ಉಳಿಯಬೇಕು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನವರಿಗೆ ತಾಲಿಬಾನ್ ಮತ್ತು ಪಾಕಿಸ್ತಾನಿ ಭೂತ ಹಿಡಿದುಕೊಂಡಿದೆ. ಇಂತಹ ದೇಶದ್ರೋಹಿ ಧೋರಣೆಯುಳ್ಳವರನ್ನು ಮತದಾರ ತಿರಸ್ಕರಿಸಬೇಕು ಎಂದು ರವಿ ಮನವಿ ಮಾಡಿಕೊಂಡರು.

ವರುಣ್ ಗಾಂಧಿ ಹೇಳಿಕೆಯಿಂದ ಪ್ರೇರಿತರಾಗಿರುವ ರಾಜ್ಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಹಿಂದೂತ್ವವಾದಿಗಳ ಕೈ ಕಡಿಯಬೇಕು ಎಂದು ಹೇಳಿದ್ದರು. ಕಾಗೋಡು ತಿಮ್ಮಪ್ಪ ಅವರ ಹೇಳಿಕೆಯನ್ನು ವಿರೋಧಿಸಿ ಹಿಂದೂತ್ವ ವಿರೋಧಿಸುವವರ ಕತ್ತು ಕತ್ತರಿಸಬೇಕು ಎಂದು ತಿರುಗೇಟು ನೀಡಿದ್ದರು. ರೇಣುಕಾಚಾರ್ಯ ಅವರ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ ಇನ್ನೊಬ್ಬ ಮುಖಂಡ ಕರಿಯಣ್ಣ ಸಂಗಟಿ, ರಾಣುಕಾಚಾರ್ಯ ಅವರ ಕಾಲು ಕತ್ತರಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X