ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ನೈಲ್ ಸಿಂಗ್ ಗೆ 2 ಲಕ್ಷ ರುಪಾಯಿ ಬಹುಮಾನ

By Staff
|
Google Oneindia Kannada News

ನವದೆಹಲಿ, ಏ. 7 : ಸಿಖ್ ಹತ್ಯಾಕಾಂಡ ನಮ್ಮ ಸಮುದಾಯದ ಕರಾಳ ಅಧ್ಯಾಯ. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿಲುವಿನಿಂದ ಸಿಖ್ ಸಮುದಾಯಕ್ಕೆ ತೀವ್ರ ಆಘಾತ ಉಂಟಾಗಿದೆ. ಘಾಸಿಗೊಂಡಿರುವ ಸಿಖ್ಖರ ನೋವು, ಕಿಚ್ಚನ್ನು ಪತ್ರಕರ್ತ ಜರ್ನೈಲ್ ಸಿಂಗ್ ಗೃಹ ಸಚಿವ ಪಿ ಚಿದಂಬರಂ ಮೇಲೆ ಬೂಟು ಎಸೆಯುವ ಮೂಲಕ ತೋರಿಸಿದ್ದಾನೆ. ಆದ್ದರಿಂದ ಪಕ್ಷದ ವತಿಯಿಂದ ಆತನಿದೆ 2 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಶಿರೋಮಣಿ ಅಕಾಲಿ ದಳ ಪಕ್ಷ ಘೋಷಿಸಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಶಿರೋಮಣಿ ಅಕಾಲಿ ದಳದ ವಕ್ತಾರ ಅವತಾರ್ ಸಿಂಗ್, ಸಿಖ್ಖರ್ ನೋವನ್ನು ಪ್ರತಿಬಿಂಬಿಸಿರುವ ಜರ್ನೈಲ್ ಸಿಂಗ್ ಧೈರ್ಯ ಮೆಚ್ಚುವಂತದ್ದು. ಆತನ ಸಾಧನೆಗೆ ಸಿಖ್ ಸಮುದಾಯ ಹರ್ಷ ವ್ಯಕ್ತಪಡಿಸಿದೆ. ಈಗಾಲಾದರೂ ಸರ್ಕಾರ ಎಚ್ಚರಗೊಳ್ಳಬೇಕು. ಸಿಖ್ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವತಾರ್ ಸಿಂಗ್ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವತಾರ್ ಸಿಂಗ್, 1984ರ ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ನಾಯಕ ಜಗದೀಶ ಟೈಟ್ಲರ್ ಅವರ ಕೈವಾಡ ಇರುವುದು ಸ್ಪಷ್ಟವಾದರೂ ಸಿಬಿಐ ಮೇಲೆ ಒತ್ತಡ ಹೇರಿ ಅವರನ್ನು ನಿರಪರಾಧಿ ಎಂದು ಹೇಳಿವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಆರೋಪಿಸಿದ್ದಾರೆ. ಸಿಬಿಐ ಕ್ರಮವನ್ನು ಖಂಡಿಸಿ ಸುಮಾರು 5 ಸಾವಿರ ಸಿಖ್ ಸಮುದಾಯ ನವದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

(ಏಜನ್ಸೀಸ್)
ಬೂಟು ಎಸೆಯುವ ಪುರಾಣ ಜಾಗತಿಕ ಮಟ್ಟದ್ದು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X