ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಲ್ಕನೇ ರಂಗದ ತೆಕ್ಕೆಗೆ ಚಿರಂಜೀವಿ?
ತೃತೀಯ ರಂಗ ರಚನೆಯಿಂದ ಬಿಜೆಪಿ ನೇತೃತ್ವದ ಎನ್ ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದಲ್ಲಿ ನಡುಕು ಹುಟ್ಟಿರುವ ಬೆನ್ನಲ್ಲೇ ನಾಲ್ಕನೇ ರಂಗ ರಚನೆ ಮಾಡಿಕೊಂಡಿರುವ ಎಸ್ಪಿ, ಆರ್ ಜೆಡಿ ಮತ್ತು ಎಲ್ ಜೆಪಿ ಇದೀಗ ತನ್ನ ತೆಕ್ಕೆಗೆ ಪ್ರಜಾರಾಜ್ಯಂ ಸೆಳೆಯಲು ಭಾರಿ ಯತ್ನ ನಡೆಸಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಜಾರಾಜ್ಯ ಪಕ್ಷವನ್ನು ತನ್ನಡೆಗೆ ಸೆಳೆದುಕೊಂಡು ನಾಲ್ಕನೇ ರಂಗದೊಂದಿಗೆ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲು ಎಸ್ಪಿ ನಾಯಕರ ಕಸರತ್ತು ನಡೆಸಿದ್ದಾರೆ.
ಹೈದರಾಬಾದ್ ನ ಚಿರಂಜೀವಿ ನಿವಾಸಕ್ಕೆ ಭೇಟಿ ನೀಡಿ ಅಮರ್ ಸಿಂಗ್ ಮತ್ತು ಸಂಜಯ್ ದತ್ ಅವರು, ರಾಜ್ಯ ಮತ್ತು ರಾಷ್ಟ್ರ ರಾಜಕಾರಣ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಮರ್ ಸಿಂಗ್ ನಾಲ್ಕನೇ ರಂಗಕ್ಕೆ ಸೇರಲು ಪ್ರಜಾರಾಜ್ಯಂ ಮುಖಂಡ ಚಿರಂಜೀವಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
(ದಟ್ಸ್ ಕನ್ನಡ ವಾರ್ತೆ)
Comments
bjp ಬಿಜೆಪಿ upa prajarajyam chiranjeevi sanjay dutt ಅಮರ್ ಸಿಂಗ್ chandrababu naidu amar singh lok sabha election 2009 sp fourth front ಲೋಕಸಭೆ ಚುನಾವಣೆ 2009
Story first published: Tuesday, April 7, 2009, 15:14 [IST]