ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಿ ಗ್ಯಾಂಗ್ ನ ಛೋಟಾ ಶಕೀಲ್ ನಿಂದ ಬೆದರಿಕೆ ಕರೆ
ರಶೀದ್ ಮಲಬಾರಿಯನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ಬೆಂಗಳೂರಿನಲ್ಲಿ ಸರಣಿ ಸ್ಫೋಟ ನಡೆಸುವುದಾಗಿ ತಾನು ಛೋಟಾ ಶಕೀಲ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಪತ್ರಿಕಾ ಕಚೇರಿಯ ಮುಖ್ಯಸ್ಥರು ಈ ವಿಷಯವನ್ನು ಪಶ್ಚಿಮ ವಲಯದ ಡಿಜಿಪಿ ಗೋಪಾಲ್ ಹೊಸೂರ್ ಅವರ ಗಮನಕ್ಕೆ ತಂದಿದ್ದಾರೆ. ಛೋಟಾ ಶಕೀಲ್ ಹೆಸರಿನಲ್ಲಿ ಫೋನ್ ಕರೆ ಬಂದಿರುವುದು ಹೌದು. ಆದರೆ, ಅದು ಆತನೇ ಅಥವಾ ಆತನ ಹೆಸರಿನಲ್ಲಿ ಬೇರೆ ವ್ಯಕ್ತಿ ಕರೆ ಮಾಡಿದ್ದಾನೆ ಎಂಬುದು ಖಚಿತವಾಗಬೇಕಿದೆ ಎಂದು ಹೊಸೂರು ತಿಳಿಸಿದ್ದಾರೆ. ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಬಾರಿ ಕಟ್ಟೆಚ್ಚರ ವಹಿಸಲಾಗಿದೆ.
(ದಟ್ಸ್
ಕನ್ನಡ
ವಾರ್ತೆ)
ಪೂರಕ
ಓದಿಗೆ:
ವರುಣ್
ಗಾಂಧಿ
ಹತ್ಯೆಗೆ
ಛೋಟಾ
ಶಕೀಲ್
ಸಂಚು
ಛೋಟಾ
ಶಕೀಲ್
ನ
ಐವರು
ಸಹಚರರ
ಬಂಧನ
Comments
ಬೆಂಗಳೂರು ಮಂಗಳೂರು dawood ibrahim ದಾವೂದ್ ಇಬ್ರಾಹಿಂ ಛೋಟಾ ಶಕೀಲ್ gopal hosur chhota shakeel rashid malabari
Story first published: Thursday, April 2, 2009, 10:18 [IST]