ತೀವ್ರ ಕುತೂಹಲ ಕೆರಳಿಸಿದ ಕಾಂಗ್ರೆಸ್ ಪಟ್ಟಿ
ಬೆಂಗಳೂರು, ಏ.1 : ತೀವ್ರ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಮಂಗಳವಾರ ಬಿಡುಗಡೆಯಾಗಿದೆ. ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಸ್ಪರ್ಧಿಸುತ್ತಾರೆ ಎನ್ನಲಾಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶಾಸಕ ಕೃಷ್ಣ ಬೈರೇಗೌಡ ಅಖಾಡಕ್ಕಿಳಿದ್ದಾರೆ. ಆದರೆ, ವಿಶ್ವಾಸಮತದ ಸಂದರ್ಭದಲ್ಲಿ ಕೇಂದ್ರದ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿದ್ದ ಚಾಮರಾಜನಗರ ಜೆಡಿಎಸ್ ಸಂಸದ ಶಿವಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿರುವುದು ತೀವ್ರ ಅಚ್ಚರಿಗೆ ಕಾರಣವಾಗಿದೆ. ಮಂಡ್ಯ ಲೋಕಸಕ್ಷೆ ಕ್ಷೇತ್ರ ಇನ್ನೂ ನಿಗೂಢವಾಗಿ ಉಳಿದಿದೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮಾರ್ಗ್ ರೇಟ್ ಆಳ್ವ, ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ, ಮಾಜಿ ಶಾಸಕ ಜಯಪ್ರಕಾಶ್ ಹೆಗ್ಡೆ ಕಣಕ್ಕಿಳಿಯಲಿದ್ದಾರೆ. ಟಿಕೆಟ್ ಕೈ ತಪ್ಪಿದ್ದಕ್ಕೆ ತೀವ್ರ ಮನನೊಂದ ಮಾತನಾಡಿದ ಶಿವಣ್ಣ, ಹಿಂದೆ ಕೆರೆ, ಮುಂದೆ ಭಾವಿ ಯಾವುದಕ್ಕೆ ಬೀಳುವುದು. ಯಾಕೆ ಹೀಗೆ ಮಾಡಿದರು. ನನಗ ಟಿಕೆಟ್ ತಪ್ಪಿಸಿದವರಿಗೆ ಅವರು ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಶಿವಣ್ಣ ದುಃಖದಿಂದ ಹೇಳಿದರು. ನೋವು ತಡೆದುಕೊಳ್ಳಲಾರದ ಅವರು, ಒಂದು ಹಂತದಲ್ಲಿ ಮಕ್ಕಳಂತೆ ಗಳಗಳನೆ ಅತ್ತರು.
ಬೆಂಗಳೂರು
ದಕ್ಷಿಣ
:
ಕೃಷ್ಣ
ಬೈರೇಗೌಡ
ಚಾಮರಾಜನಗರ
:ದ್ರುವನಾರಾಯಣ
ಉಡುಪಿ
:ಜಯಪ್ರಕಾಶ್
ಹೆಗ್ಡೆ
ಉತ್ತರ
ಕನ್ನಡ
:
ಮಾರ್ಗ್
ರೇಟ್
ಆಳ್ವ
ಚಿಕ್ಕಬಳ್ಳಾಪುರ
:
ಎಂ
ವೀರಪ್ಪ
ಮೊಯ್ಲಿ
(ದಟ್ಸ್ ಕನ್ನಡ ವಾರ್ತೆ)