ಛೋಟಾ ಶಕೀಲ್ ನ ಐವರು ಸಹಚರರ ಬಂಧನ
ಮಂಗಳೂರು, ಮಾ. 31: ಲೋಕಸಭೆ ಚುನಾವಣೆ ವೇಳೆಯಲ್ಲಿ ಪ್ರಮುಖ ರಾಜಕಾರಣಿಗಳನ್ನು ಅಪಹರಿಸಲು ಸಂಚು ರೂಪಿಸಿದ್ದ ಐವರು ಭೂಗತ ಪಾತಕಿಗಳನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಈ ಐವರು ಭೂಗತ ದೊರೆ ಛೋಟಾ ಶಕೀಲ್ ನ ಸಹಚರರು ಎಂದು ತಿಳಿದು ಬಂದಿದೆ ಎಂದು ಡಿಜಿಪಿ ಅಜಯ್ ಕುಮಾರ್ ಸಿಂಗ್ ತಿಳಿಸಿದರು.
ಸೋಮವಾರ ಪಶ್ಚಿಮ ವಲಯದ ವಿಶೇಷ ತನಿಖಾ ತಂಡ ಬಂಧಿಸಿರುವ ಐವರಲ್ಲಿ ಇಂಟರ್ ಪೊಲ್ ನ ವಾಂಟೆಡ್ ಪಟ್ಟಿಯಲ್ಲಿರುವ ಪಾತಕಿ ರಷೀದ್ ಮಲಬಾರಿ ಕೂಡ ಇದ್ದಾನೆ. ಪ್ರಮುಖ ರಾಜಕಾರಣಿಗಳನ್ನು ಅಪಹರಿಸುವುದು, ಹತ್ಯೆಗೈಯುವುದು ಇವರ ಉದ್ದೇಶವಾಗಿತ್ತು. ಇವೆಲ್ಲಾ ಡಾನ್ ದಾವೂದ್ ಇಬ್ರಾಹಿಂ ನ ಬಲಗೈ ಬಂಟ ಶಕೀಲ್ ನ ಯೋಜನೆ ಎಂದು ಅಜಯ್ ಕುಮಾರ್ ಸಿಂಗ್ ಹೇಳಿದರು.
ಅವಿಭಜಿತ
ದಕ್ಷಿಣ
ಕನ್ನಡ
ಜಿಲ್ಲೆಯ
ಮೂಲದವನಾದ
ರಷೀದ್
ಮಲಬಾರಿ
ಅಲಿಯಾಸ್
ಡಬಲ್(
38)
,
ಸಹಿಲ್
ಇಬ್ರಾಹಿಂ
ಇಬ್ಬರು
ಸದ್ಯ
ಮಹಾರಾಷ್ಟ್ರದ
ಥಾಣಾ
ಜಿಲ್ಲೆಯಲ್ಲಿ
ನೆಲೆಯೂರಿ
ಈ
ದುಷ್ಕೃತ್ಯಕ್ಕೆ
ಸಂಚು
ರೂಪಿಸಿದ್ದರು
ಎನ್ನಲಾಗಿದೆ.
ಪಿಸ್ತೂಲ್
ಹಾಗೂ
19
ಸಾವಿರ
ನಗದನ್ನು
ವಶಪಡಿಸಿಕೊಳ್ಳಲಾಗಿದೆ.
ಸುಮಾರು
13
ವರ್ಷಗಳಿಂದ
ತಲೆ
ಮರೆಸಿಕೊಂಡಿರುವ
ರಷೀದ್
ಮಲಬಾರಿಯ
ಮೇಲೆ
5
ಕೊಲೆ
ಕೇಸುಗಳಿವೆ
.
ಮಲೇಷಿಯಾ
ಹಾಗೂ
ಇಂಟರ್
ಪೊಲ್
ಗೆ
ಬೇಕಾದ
ಇವನು
9
ತಿಂಗಳ
ಹಿಂದೆ
ನೇಪಾಳ
ಮೂಲಕ
ಭಾರತ
ಪ್ರವೇಶಿಸಿದ್ದಾನೆ
ಎಂದು
ಅಜಯ್
ಕುಮಾರ್
ಮಾಹಿತಿ
ನೀಡಿದರು.
ಪಾತಕಿಗಳನ್ನುಏ.
13
ರವರೆಗೆ
ನ್ಯಾಯಾಂಗ
ಬಂಧನದಲ್ಲಿರಿಸಲಾಗಿದೆ.
ಇವರನ್ನು
ಹಿಡಿದ
ಪೊಲೀಸ್
ತಂಡಕ್ಕೆ
2
ಲಕ್ಷರು
ಬಹುಮಾನ
ಘೋಷಿಸಲಾಗಿದೆ
ಎಂದು
ಐಜಿಪಿ
ಗೋಪಾಲ್
ಹೊಸೂರ್
ಹೇಳಿದರು.
(ಏಜೆನ್ಸೀಸ್)