ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರೋಧ ಪಕ್ಷಗಳಿಂದಲೇ ಚುನಾವಣಾ ಅಕ್ರಮ : ರೆಡ್ಡಿ

By Staff
|
Google Oneindia Kannada News

Janardhana Reddy submits a memorandum to Vidyashankar
ಬೆಂಗಳೂರು, ಮಾ. 30 : ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳ ಪಕ್ಷಗಳೇ ಚುನಾವಣಾ ಅಕ್ರಮಗಳಲ್ಲಿ ನಿರತವಾಗಿದ್ದು, ಭಾರತೀಯ ಜನತಾ ಪಕ್ಷವನ್ನು ಅನವಶ್ಯಕವಾಗಿ ದೂರುತ್ತಿವೆ ಎಂದು ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ದೂರಿದ್ದಾರೆ.

ಈ ಕುರಿತಾಗಿ ಬಿಜೆಪಿಯ ಬಳ್ಳಾರಿ ಘಟಕದ ಅಧ್ಯಕ್ಷ ಡಾ.ಎಸ್.ಜಿ.ವಿ. ಮಹಿಪಾಲ್ ಅವರು ಸಹಿ ಹಾಕಿರುವ ಮನವಿ ಪತ್ರವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿದ್ಯಾಶಂಕರ್ ಅವರಿಗೆ ಜನಾರ್ದನ ರೆಡ್ಡಿ ಭಾನುವಾರ ನೀಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರೆಡ್ಡಿ, ನಕಲಿ ಮತದಾನ ಮಾಡಿಸಲೆಂದು ಪಕ್ಕದ ಆಂಧ್ರಪ್ರದೇಶದಿಂದ ಜನರನ್ನು ಕಾಂಗ್ರೆಸ್ ಪಕ್ಷ ಕರೆತರುತ್ತಿದೆ, ಇದನ್ನು ತಡೆಯಬೇಕು ಎಂದರು.

ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಮುಕ್ತವಾಗಿ ನಡೆಸಬೇಕೆಂದ ಅವರು, ಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬಳಸುವುದಕ್ಕೆ ಬಿಜೆಪಿ ಯಾವತ್ತೂ ವಿರೋಧಿಸಿದೆ, ಈ ಕುರಿತಂತೆ ಇಡೀ ಬಳ್ಳಾರಿ ಜಿಲ್ಲಾಡಳಿತವನ್ನು ಆಯೋಗ ತರಾಟೆಗೆ ತೆಗೆದುಕೊಂಡರೆ ಸ್ವಾಗತಿಸುತ್ತೇನೆ ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X