ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 150 ಹೊಸ ನ್ಯಾಯಾಲಯಗಳು

By Staff
|
Google Oneindia Kannada News

ಬೆಂಗಳೂರು, ಮಾ. 29: ದೇಶದಲ್ಲಿ 4000 ಹೆಚ್ಚುವರಿ ನ್ಯಾಯಾಲಯಗಳು ಪ್ರಾರಂಭವಾಗಲಿದ್ದು ಕರ್ನಾಟಕದಲ್ಲಿ 150 ನ್ಯಾಯಾಲಯಗಳು ಪ್ರಾರಂಭವಾಗಲಿವೆ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಪ್ರಧಾನ ಪೋಷಕರಾದ ಡಾ. ಕೆ.ಜಿ. ಬಾಲಕೃಷ್ಣನ್ ಅವರು ತಿಳಿಸಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಮೆಗಾ ಲೋಕ ಅದಾಲತ್ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು ಲೋಕ ಅದಾಲತ್‌ಗಳು ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಅತ್ಯುತ್ತಮ ಪಾತ್ರ ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ಉಚ್ಛನ್ಯಾಯಾಲಯದ ಕಾನೂನು ಸೇವಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ 22 ದಿನಗಳಲ್ಲಿ 26,000ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಿರುವುದು ಪ್ರಶಂಸನಾರ್ಹ. ಕಾಮನ್‌ವೆಲ್ತ್ ರಾಷ್ಟ್ರಗಳು ಮತ್ತು ನೆರೆಹೊರೆಯ ರಾಷ್ಟ್ರಗಳು ಲೋಕ್ ಅದಾಲತ್ ಕಾರ್ಯಕ್ರಮವನ್ನು ತಮ್ಮ ದೇಶದಲ್ಲಿ ನಡೆಸಲಿವೆ ಎಂದರು.

ಜಗತ್ತಿನಲ್ಲಿ ನ್ಯಾಯಾಂಗ ವಿತರಣೆಯಲ್ಲಿ ಭಾರತ ಮುಂದಿದೆ. ಅಮೇರಿಕಾ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಕಳೆದ ವರ್ಷ 5000 ಪ್ರಕರಣಗಳು ದಾಖಲಾಗಿ 160 ಪ್ರಕರಣಗಳು ವಿಚಾರಣೆಗೆ ಬಂದರೆ, ಬೆಲರೂಸ್ ದೇಶದ ನ್ಯಾಯಾಲಯದಲ್ಲಿ ಮೂರು ಪ್ರಕರಣಗಳು ದಿನಕ್ಕೆ ಇತ್ಯರ್ಥಗೊಳ್ಳುತ್ತಿವೆ. ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಕಳೆದ ಮೂರು ತಿಂಗಳಲ್ಲಿ 7300 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಭಾರತದಲ್ಲಿ ಮೂರು ರಾಜ್ಯಗಳನ್ನುಳಿದು ಇನ್ನಿತರ ರಾಜ್ಯಗಳಲ್ಲಿ ದಾಖಲಾಗುವ ಪ್ರಕರಣಗಳು ನ್ಯಾಯ ವಿತರಣೆ ಪ್ರಕರಣಗಳಿಗೆ ಸರಿ ಸಮಾನವಾಗಿವೆ. ನ್ಯಾಯಾಲಯಗಳಲ್ಲಿ ದಾಖಲಾಗುವ ಶೇ. 70 ರಷ್ಟು ಪ್ರಕರಣಗಳು ಶೀಘ್ರವಾಗಿ ಇತ್ಯರ್ಥವಾದರೆ ಉಳಿದ ಶೇ 30 ಪ್ರಕರಣಗಳು ನಿಧಾನವಾಗುತ್ತಿವೆ ಎಂದು ಅವರು ತಿಳಿಸಿದರು.

ಕೇರಳದಲ್ಲಿ 1000 ಜನರಿಗೆ 28 ಪ್ರಕರಣಗಳು ದಾಖಲಾದರೆ ಜಾರ್ಖಂಡ್‌ದಲ್ಲಿ 1000 ಜನಕ್ಕೆ 3 ಪ್ರಕರಣಗಳು ದಾಖಲಾಗುತ್ತಿವೆ. ಕಾರಣ ಅವರಿಗಿರುವ ಕಾನೂನು ಅರಿವಿನ ಕೊರತೆ ಮತ್ತು ಸೌಲಭ್ಯದ ಕೊರತೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ಕರ್ನಾಟಕದ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಮಹಾ ಪೋಷಕರಾದ ಪಿ.ಡಿ. ದಿನಕರನ್ ಅವರು ಮಾತನಾಡಿ ಜನಸಂಖ್ಯಾ ಸ್ಪೋಟ ಜಾತಿ, ಮತ, ಭಾಷೆಗಳ ನಡುವಿನ ಭೇದಗಳು ಹೆಚ್ಚು ಪ್ರಕರಣಗಳು ದಾಖಲಾಗಲು ಕಾರಣ. ಹೊಸ ನ್ಯಾಯಲಯಗಳು ಪ್ರಾರಂಭವಾಗಿಲ್ಲದರ ನಡುವೆಯೂ ಹೆಚ್ದು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ ಎಂದ ಅವರು ಲೋಕ ಅದಾಲತ್‌ಗಳು ಉತ್ತಮ ಕೆಲಸವನ್ನು ನಿರ್ವಹಿಸುತ್ತಿದ್ದು ಶೀಘ್ರ, ಸಮಯೋಚಿತ, ಕಡಿಮೆ ಖರ್ಚಿನಲ್ಲಿ ನ್ಯಾಯವನ್ನು ಒದಗಿಸುತ್ತಿದೆ. ಅದು ಜನಗಳ ನ್ಯಾಯಾಲಯ. ಯಾರಿಗೂ ಸೋಲು ಗೆಲುವುಗಳಿಲ್ಲ. ಇಬ್ಬರಿಗೂ ನ್ಯಾಯ ಸಿಗುತ್ತದೆ. ಲೋಕ ಅದಾಲತ್‌ಗಳಲ್ಲಿ ಬ್ಯಾಂಕಿನ ವ್ಯವಹಾರ, ಸಿವಿಲ್, ಅಪಘಾತ, ವೈವಾಹಿಕ ಹಾಗೂ ಇನ್ನಿತರ ಪ್ರಕರಣಗಳು ಇತ್ಯರ್ಥವಾಗುತ್ತಿದ್ದು ಇದರಿಂದ ಸಾಮಾನ್ಯ ಜನರ ಕಷ್ಟಗಳಿಗೆ ಪರಿಹಾರ ದೊರಕುತ್ತಿದೆ ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X