ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವರುಣ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ನ್ಯಾಯಮೂರ್ತಿ ಇಮ್ತಿಯಾಜ್ ಮುರ್ತಾಜಾ ಮತ್ತು ಎಸ್ ಸಿ ನಿಗಮ್ ಅವರನ್ನು ಒಳಗೊಂಡ ನ್ಯಾಯಪೀಠ ವರುಣ್ ಗಾಂಧಿಯವರ ಅರ್ಜಿಯನ್ನು ವಜಾಗೊಳಿಸಿದೆ. ವರುಣ್ ಪರ ವಕೀಲ ಗೋಪಾಲ್ ಅವರು ಪಿಲಿಭಿತ್ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಾರ್ಕೆಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಐರನ್ನು ವಜಾಗೊಳಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ನ್ಯಾಯಪೀಠ ವರುಣ್ ಪರ ವಕೀಲರ ಮನವಿಯನ್ನು ತಿರಸ್ಕರಿಸಿದೆ. ಇದರಿಂದ ವರುಣ್ ಪರ ವಕೀಲ ಗೋಪಾಲ್ ಅವರು ಸುಪ್ರಿಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವರುಣ್ ಗಾಂಧಿ ಅಲ್ಪಸಂಖ್ಯಾತರ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಬಾರ್ಕೆಡ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಐಪಿಸಿ 153A ಮತ್ತು 188 ಕಾನೂನಿನಡಿ ಪ್ರಕರಣ ದಾಖಲಾಗಿತ್ತು.
(ದಟ್ಸ್
ಕನ್ನಡ
ವಾರ್ತೆ)
ವರುಣ್
ಸಮರ್ಥಿಸಿಕೊಂಡ
ಬಿಜೆಪಿ
ವಿರುದ್ದ
ಪಿಎಂ
ಕಿಡಿ
Comments
bjp ಬಿಜೆಪಿ supreme court ls polls 2009 varun gandhi hate speech ವರುಣ್ ಗಾಂಧಿ ಪ್ರಚೋದನಕಾರಿ ಹೇಳಿಕೆ ಅಲಹಾಬಾದ್ ಹೈಕೋರ್ಟ್ ಲೋಕಸಭೆ ಚುನಾವಣೆ 2009
Story first published: Wednesday, March 25, 2009, 12:20 [IST]