ನೆಹರೂ ಕುಟುಂಬ ಮಹಾರಾಜ ವರುಣ್, ಮುತಾಲಿಕ್
ಮಂಗಳವಾರ ನಗರದ ಟೌನ್ ಹಾಲ್ ನಲ್ಲಿ ವಿಶ್ವ ಹಿಂದು ಜಾಗರಣಾ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸತ್ಯವನ್ನು ಅತ್ಯಂತ ಧೈರ್ಯದಿಂದ ವರುಣ್ ಗಾಂಧಿ ಹೇಳಿದ್ದಾರೆ. ಇದಕ್ಕೆ ನಮ್ಮ ಸಂಪೂರ್ಣ ಸಹಮತವಿದೆ ಎಂದರು. ವರುಣ್ ಗಾಂಧಿ ನೆಹರೂ ಕುಟುಂಬದ ಮಹಾರಾಜ ಎಂದು ಕೊಂಡಾಡಿದ ಮುತಾಲಿಕ್, ಇಂದಿನ ಯುವಕರ ರಕ್ತದಲ್ಲಿ ಹಿಂದೂತ್ವ ಎನ್ನುವುದು ಹೇಗಿದೆ ಎಂಬುದಕ್ಕೆ ವರುಣ್ ಗಾಂಧಿ ಸಾಕ್ಷಿ ಎಂದು ಹೇಳಿದರು.
ಗೋವಾ ಸರ್ಕಾರ ಇತ್ತೀಚೆಗೆ ಶ್ರೀರಾಮಸೇನೆ ಸಂಘಟನೆಯನ್ನು ನಿಷೇಧಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಲ್ಲಿರುವ ಅನೇಕ ಹಿಂದೂ ಮುಖಂಡರು ಕಳಕಳಿಯ ವಿನಂತಿ ಮೇರೆಗೆ ಅಲ್ಲಿ ಸಂಘಟನೆ ಸ್ಥಾಪಿಸಲು ಚಿಂತನೆ ನಡೆಸಲಾಗಿತ್ತು. ಆದರೆ, ಕೆಲವು ಪಟ್ಟಭದ್ರರ ಹಿತಾಸಕ್ತಿಯಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ಅವರು ಬೇಸರದಿಂದ ಹೇಳಿದರು.
ಕಳೆದ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಮುತಾಲಿಕ್ ರಾಷ್ಟ್ರೀಯ ಸುದ್ದಿಯಾಗಿ ಹೋಗಿದ್ದರು. ಮಂಗಳೂರು ಪಬ್ ಪ್ರಕರಣ ಹಾಗೂ ಪ್ರೇಮಿಗಳ ದಿನಾಚರಣೆ ವಿರೋಧಿಸಿ ದಿನ ಬೆಳಗಾಗುವುದರಲ್ಲಿ ಮುತಾಲಿಕ್ ಕುಖ್ಯಾತಿ ಪಡೆದಿದ್ದರು.
(ದಟ್ಸ್
ಕನ್ನಡ
ವಾರ್ತೆ)
ವರುಣ್
ಸಮರ್ಥಿಸಿಕೊಂಡ
ಬಿಜೆಪಿ
ವಿರುದ್ದ
ಪಿಎಂ
ಕಿಡಿ