ಟಾಟಾ ವಿರುದ್ಧ ಪಾಟ್ನಾ ಹೈಕೋರ್ಟ್ ನಲ್ಲಿ ದೂರು
ಪಾಟ್ನಾ, ಮಾ. 24 : ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ಶ್ರೀಸಾಮಾನ್ಯನ ಕಾರು ಎಂದೇ ಪ್ರಸಿದ್ಧಿ ಪಡೆದಿರುವ ನ್ಯಾನೋ ಕಾರು ಬಿಡುಗಡೆಗೆ ವಿಘ್ನವೊಂದು ಅಂಟಿಕೊಂಡಿರುವ ಸುದ್ದಿಯೊಂದು ಲಾಲು ಸಾಮ್ರಾಜ್ಯದ ಬಿಹಾರದಿಂದ ವರದಿಯಾಗಿದೆ. ನ್ಯಾನೋ ಬಿಡುಗಡೆ ಮಾಡುವ ಮೂಲಕ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಅನುಕೂಲ ಮಾಡಿಕೊಟ್ಟಂತಾಗಲಿದೆ ಎನ್ನುವುದು ಅಲ್ಲಿನ ವಕೀಲೆಯೊಬ್ಬರು ದೂರಿದ್ದು ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದೇಶದಲ್ಲಿ ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಟಾಟಾ ಕಂಪನಿ ಮುಖ್ಯಸ್ಥ ರತನ್ ಟಾಟಾ ನ್ಯಾನೋ ಕಾರನ್ನು ಬಿಡುಗಡೆ ಮಾಡಿರುವುದು ಸರಿಯಲ್ಲ. ಇದು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಬಿಹಾರದ ಶ್ರುತಿ ಸಿಂಗ್ ಎನ್ನುವ ವಕೀಲೆ ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇವರ ಪ್ರಕಾರ ನ್ಯಾನೋ ಬಿಡುಗಡೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಅನುಕೂಲವಾಗಲಿದೆ.
ಅದು ಹೇಗೆಂದರೆ, ಟಾಟಾ ಮುಖ್ಯಸ್ಥ ರತನ್ ಟಾಟಾ ಅವರ ನ್ಯಾನೋ ಕಾರ್ ತಯಾರಿಕಾ ಘಟಕ ಪಶ್ಚಿಮ ಬಂಗಾಲದ ಸಿಂಗೂರ್ ನಿಂದ ಎತ್ತಂಗಡಿಯಾದ ನಂತರ ಗುಜರಾತಿನಲ್ಲಿ ಸ್ಥಾಪನೆಯಾಯಿತು. ಇದರಲ್ಲಿ ನರೇಂದ್ರ ಮೋದಿ ಅವರ ಕೈವಾಡ ಇರುವುದು ಸ್ಪಷ್ಟ. ಈಗ ಕಾರು ಬಿಡುಗಡೆ ಮಾಡುವುದರಿಂದ ಮತದಾರರ ಮೇಲೆ ಒತ್ತಡ ಹೇರುವ ಸಾಧ್ಯತೆಗಳು ಇವೆ. ಚುನಾವಣೆ ಪೂರ್ವದಲ್ಲಿ ನ್ಯಾನೋ ಬಿಡುಗಡೆ ಮಾಡಿರುವುದರಲ್ಲಿ ರಾಜಕೀಯ ವಾಸನೆ ಅಡಗಿದೆ. ಘಟಕ ಸ್ಥಾಪಿಸಲು ಮೋದಿ ಭಾರಿ ಅನುಕೂಲ ಒದಗಿಸಿದ್ದರಿಂದ ಅಭಿನಂದನೆ ಸಲ್ಲಿಸಲು ರತನ್ ಟಾಟಾ ತಮ್ಮ ಕನಸಿನ ಕೂಸು ನ್ಯಾನೋ ಕಾರ್ ಬಿಡುಗಡೆ ಮಾಡಿದ್ದಾರೆ ಎಂದು ಶ್ರುತಿಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ನ್ಯಾನೋ
ಕಾರು
ಬಿಡುಗಡೆ
ಮಾಡಿದ
ರತನ್
ಟಾಟಾ