ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಿಯಾಂಕಾಳಿಂದ ವರುಣ್ ಗಾಂಧಿಗೆ ಬುದ್ಧಿ ಮಾತು

By Staff
|
Google Oneindia Kannada News

ರಾಯ್ ಬರೇಲಿ, ಮಾ. 23 : ವರುಣ್ ಗಾಂಧಿ ಅವರ ಪ್ರಚೋದನಕಾರಿ ಹೇಳಿಕೆ ತೀವ್ರ ವಿಷಾದಕರ. ವರುಣ್ ಗಾಂಧಿ ಭಗವದ್ಗಿತೆಯನ್ನು ಓದಲಿ. ಅದರಲ್ಲಿರುವ ವಿಷಯವನ್ನು ಅರ್ಥ ಮಾಡಿಕೊಳ್ಳಲಿ ಎಂದು ಅಕ್ಕ ಪ್ರಿಯಾಂಕಾ ಗಾಂಧಿ ತಮ್ಮನಿಗೆ ಬುದ್ಧಿ ಮಾತು ಹೇಳಿದ್ದಾರೆ.

ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವರುಣ್ ಗಾಂಧಿ ನೀಡಿರುವ ಹೇಳಿಕೆ ವಿಷಾಧದ ಸಂಗತಿ ಎಂದರು. ಅಲ್ಪಸಂಖ್ಯಾತರ ಮೇಲೆ ಪ್ರಚೋದನಕಾರಿ ಹೇಳಿಕೆ ಗಾಂಧಿ ವಂಶದ ತತ್ವಕ್ಕೆ ವಿರುದ್ಧವಾಗಿದೆ. ಯಾವ ಕಾರಣಕ್ಕೂ ಗಾಂಧಿ ಮನೆತನ ಯಾವ ಸದಸ್ಯ ಇಂತಹ ಹೇಳಿಕೆ ನೀಡಿರಲಿಲ್ಲ. ವರುಣ್ ಗಾಂಧಿ ಹೇಳಿಕೆ ದುರದೃಷ್ಟಕರ ಎಂದು ವಿವರಿಸಿದರು.

ಉತ್ತರ ಪ್ರದೇಶದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವರುಣ್ ಗಾಂಧಿ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಅದು ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಆಯೋಗ ವರುಣ್ ಗಾಂಧಿಗೆ ನೋಟಿಸ್ ನೀಡಿತ್ತು. ನೀತಿ ಸಂಹಿತೆ ಉಲ್ಲಂಘನೆ ಆಧಾರದ ಮೇಲೆ ವರುಣ್ ಗಾಂಧಿಯನ್ನು ಕಣಕ್ಕೆ ಇಳಿಸಬಾರದು ಎಂದು ಆಯೋಗ ಬಿಜೆಪಿಗೆ ತಾಕೀತು ಮಾಡಿತ್ತು. ಆದರೆ, ಬಿಜೆಪಿ ಅದನ್ನು ನಿರಾಕರಿಸಿದೆ.

(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ಬೆನ್ನಿಗೆ ನಿಂತ ಬಿಜೆಪಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X