ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣ್ ಗಾಂಧಿಯನ್ನು ಜೈಲಿಗೆ ಅಟ್ಟಿ, ಲಾಲು

By Staff
|
Google Oneindia Kannada News

Lalu prasad Yadav
ನವದೆಹಲಿ, ಮಾ. 23: ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅಲ್ಪಸಂಖ್ಯಾತರ ವಿರುದ್ಧ ಮಾತನಾಡಿರುವ ಪ್ರಚೋದನಕಾರಿ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರದ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ನಾನೇನಾದರೂ ಗೃಹ ಸಚಿವನಾಗಿದ್ದರೆ ವರುಣ್ ಗಾಂಧಿಯನ್ನು ಜೈಲಿಗೆ ಕಳುಹಿಸುತ್ತಿದ್ದೆ ಎಂದು ಗುಡುಗಿದ್ದಾರೆ.

ಆತನನ್ನು ಶಿಕ್ಷಿಸುವುದು ನನ್ನ ಅಧಿಕಾರ ವ್ಯಾಪ್ತಿಯೊಳಗೆ ಬರುತ್ತಿದ್ದರೆ ವರುಣ್ ಮತ್ತು ಅವರನ್ನು ಸಮರ್ಥಿಸುವ ನಾಯಕರು ಇಷ್ಟೊತ್ತಿಗೆ ಜೈಲಿನ ಕಂಬಿ ಎಣಿಸಬೇಕಾಗಿತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಗಾಂಧಿ ಬರೀ ತೋರಿಕೆಯ ಅಪರಾಧಿಯಾಗಿದ್ದು. ಇದರ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂದು ಅವರು ಆರೋಪಿಸಿದರು. ಶಿವಸೇನಾ ಮುಖಂಡ ಬಾಳಾ ಠಾಕ್ರೆ ಅವರು ವರುಣ್ ಗಾಂಧಿಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ.

ದೇಶದಲ್ಲಿ ಏಕತೆ ಮತ್ತು ಸಮಗ್ರತೆ ಕಾಪಾಡುಬೇಕೆಂದರೆ ವರುಣ್ ಗಾಂಧಿ ಶಿಕ್ಷೆ ನೀಡಲೇ ಬೇಕು. ವರುಣ್ ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಆರ್ಎಸ್ ಎಸ್ ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿ ಎಂದು ಲಾಲು ತಾಕೀತು ಮಾಡಿದರು. ಬಿಜೆಪಿಯಲ್ಲಿ ವರುಣ್ ಗಾಂಧಿ ಹೇಳಿಕೆ ದ್ವಂದ್ವ ಹೇಳಿಕೆಗೆಳು ಬಂದಿವೆ. ಬಿಜೆಪಿ ವಕ್ತಾರ ವರುಣ್ ಗಾಂಧಿ ಹೇಳಿಕೆಗೆ ಬೆಂಬಲವಿಲ್ಲ ಎಂದಿದ್ದರೆ, ಇನ್ನೊಬ್ಬ ನಾಯಕ ವೆಂಕಯ್ಯ ನಾಯ್ಡು ಅದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)
ವರುಣ್ ಸ್ಪರ್ಧಿಸುವಂತಿಲ್ಲ ಆಯೋಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X