ಅಂಗಡಿಗೆ ಟಿಕೆಟ್ ನೀಡದಂತೆ ಕರವೇ ಪ್ರತಿಭಟನೆ
ಹುಬ್ಬಳ್ಳಿ, ಮಾ. 23 : ಪಾಲಿಕೆ ಮೇಲೆ ಧ್ವಜ ಹಾರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರವೇ ಕಾರ್ಯಕರ್ತರು ಸಂಸದ ಸುರೇಶ ಅಂಗಡಿ ಅವರ ಕ್ರಮವನ್ನು ಖಂಡಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಘೇರಾವ್ ಹಾಕುವ ವಿಫಲ ಯತ್ನ ನಡೆಸಿದ ಘಟನೆ ಸೋಮವಾರ ನಡೆದಿದೆ.
ಸುಮಾರು 25-30 ಜನರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಘೋಷಣೆ ಕೂಗುತ್ತಾ ಕನ್ನಡ ವಿರೋಧಿಯಾಗಿರುವ ಸಂಸದ ಸುರೇಶ್ ಅಂಗಡಿಗೆ ಯಾವ ಕಾರಣಕ್ಕೂ ಲೋಕಸಭೆ ಟಿಕೆಟ್ ನೀಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಘೇರಾವ್ ಹಾಕಲು ಕಾರ್ಯಕರ್ತರು ಮುಂದಾದಾಗ ಪೊಲೀಸ್ ಪ್ರವೇಶವಾಯಿತು. ಆಗ, ಪೊಲೀಸರು ಮತ್ತು ಕಾರ್ಯಕರ್ತರು ಕೈಕೈಮಿಲಾಯಿಸುವ ಹಂತಕ್ಕೆ ತಲುಪಿತು. ಪರಿಸ್ಥಿತಿ ಅರಿತ ಪೊಲೀಸರು ಕರವೇ ಕಾರ್ಯಕರ್ತರನ್ನು ಪೊಲೀಸ್ ಬಂಧಿಸಿದರು. ಇತ್ತೀಚೆಗೆ ಸಂಸದ ಸುರೇಶ್ ಅಂಗಡಿ ಪಾಲಿಕೆ ಮೇಲಿನ ಭಗವಾಧ್ವಜಕ್ಕೆ ತೆಗೆದು ಕನ್ನಡ ಧ್ವಜ ಹಾರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಎಂಇಎಸ್ ಪರ ನಿಂತಿದ್ದರು. ಇದು ರಾಜ್ಯಾದ್ಯಾಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ನಂತರ ಅಂಗಡಿ ತಪ್ಪೊಪ್ಪಿಕೊಂಡಿದ್ದರು.
ಇದಕ್ಕೂ ಮುನ್ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ, ಯುಪಿಎ ಹಾಗೂ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಅವಸಾನದ ಅಂಚಿನಲ್ಲಿರುವ ಪಕ್ಷವಾಗಿದೆ. ಅದರ ಆಯುಷ್ಟ ಮುಗಿದು ಹೋಗಿದೆ ಎಂದು ಲೇವಡಿ ಮಾಡಿದ ಅವರು, ಕಾಂಗ್ರೆಸ್ ಪರಿಸ್ಥಿತಿಯನ್ನು ಸುಧಾರಿಸಲು ಖುದ್ದು ಸೋನಿಯಾ ಗಾಂಧಿ ಅವರೇ ಬರಬೇಕಾಯಿತಲ್ಲ ಎಂದು ಟೀಕಿಸಿದರು.
(ದಟ್ಸ್
ಕನ್ನಡ
ವಾರ್ತೆ)
ಕನ್ನಡಿಗರ
ಕ್ಷಮೆಯಾಚಿಸಿದ
ಅಂಗಡಿ,
ಪಾಟೀಲ್