ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮಲಿಂಗ ರಾಜು ಸಹೋದರರು ಸಿಬಿಐ ಕಸ್ಟಡಿಗೆ
ಹೈದರಾಬಾದ್, ಮಾ.21: ಸತ್ಯಂ ಕಂಪ್ಯೂಟರ್ಸ್ ನ ಮಾಜಿ ಅಧ್ಯಕ್ಷ ರಾಮಲಿಂಗರಾಜು ಮತ್ತವರ ಸಹೋದರರ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲದ ಕಾರಣ ಮಾಜಿ ಸಿಎಫ್ ಒ ಹಾಗೂ ಅವರನ್ನು 4 ದಿನಗಳ ಕಾಲ ತಮ್ಮ ಕಸ್ಟಡಿಗೆ ಒಪ್ಪಿಸಬೇಕು ಎಂದು ಸಿಬಿಐ ಮನವಿ ಮಾಡಿಕೊಂಡಿತ್ತು. ಈ ಮೇರೆಗೆ ಸ್ಥಳೀಯ ನ್ಯಾಯಾಲಯ ಎರಡು ದಿನಗಳ ವಿಚಾರಣೆಗೆ ಅನುಮತಿ ನೀಡಿದೆ.
ಶನಿವಾರ ಮುಂಜಾನೆ ರಾಮಲಿಂಗರಾಜು, ಅವರ ಸಹೋದರ ರಾಮರಾಜು, ಮಾಜಿ ಸಿಎಫ್ ಒ ವಡ್ಲಮಾನಿ ಶ್ರೀನಿವಾಸ್ ರನ್ನು ಸಿಬಿಐ ಅಧಿಕಾರಿಗಳು ಚಂಚಲ್ ಗೂಡ ಜೈಲಿನಿಂದ ದಿಲ್ ಕುಷ್ ಅತಿಥಿಗೃಹಕ್ಕೆ ಕರೆದೊಯ್ದರು. ಅಲ್ಲಿ ಎರಡು ದಿನಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.
(ಏಜೆನ್ಸೀಸ್)
Comments
Story first published: Saturday, March 21, 2009, 14:00 [IST]