ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಇಟಿ ರದ್ದು ಆದೇಶ ವಾಪಸ್: ರಾಮಚಂದ್ರ ಗೌಡ
ವೃತ್ತಿಶಿಕ್ಷಣ ಕೋರ್ಸ್ ಗಳಿಗೆ ಹಿಂದಿನ ವರ್ಷ ಜಾರಿಯಲ್ಲಿದ್ದಂತೆ ಈ ವರ್ಷವೂ (2009-10) ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡದಿರಲಿ ಎಂಬ ಕಾರಣಕ್ಕೆ ತುರ್ತು ನಿರ್ಧಾರ ಕೈಗೊಳ್ಳಲಾಗಿದೆ ಎಂದರು ಸಚಿವರು.
ಸಿಇಟಿ ರದ್ದುಪಡಿಸಿ ಸರಕಾರ ಮಾ.5ರಂದು ಆದೇಶ ಹೊರಡಿಸಿತ್ತು. ಆದೇಶಕ್ಕೆ ಪೂರಕವಾಗಿ ಸರಕಾರಿ ಸೀಟುಗಳಿಗೆ ಪ್ರವೇಶ ನೀಡುವ ಸಂಬಂಧ ರಚನೆಯಾಗಿರುವ ವೃತ್ತಿ ಶಿಕ್ಷಣ ಕಾಯಿದೆ 2006ಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ್ದರಿಂದ ತಿದ್ದುಪಡಿ ಸಾಧ್ಯವಾಗಲಿಲ್ಲ. ಹಾಗಾಗಿ ಆದೇಶ ವಾಪಸ್ ಪಡೆಯಲಾಗಿದೆ . ಮುಂದಿನ ವರ್ಷ ಸಿಇಟಿ ರದ್ದಾಗಲಿದೆ. ಒಂದೆರಡು ದಿನಗಳಲ್ಲಿ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುತ್ತದೆ ಎಂದು ಸಚಿವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
Comments
ಬಿಜೆಪಿ ramachandra gowda karnataka cet ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆ ವೈದ್ಯಕೀಯ lok sabha polls 09 ಇಂಜಿನಿಯರ್ ರಾಮಚಂದ್ರ ಗೌಡ ದಂತವೈದ್ಯಕೀಯ medical education higher education
Story first published: Saturday, March 21, 2009, 10:10 [IST]