ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಗರೇಟು ಜಗಳ ಆತ್ಮಹತ್ಯೆಗೆ ಶರಣಾದ ಗಗನಸಖಿ
ಮುಂಬೈ, ಮಾ. 18 : ಸಹದ್ಯೋಗಿ ಜತೆ ಸಿಗರೇಟು ಚಟದ ಬಗ್ಗೆ ಉಂಟಾದ ಜಗಳ ಆತ್ಮಹತ್ಯೆಯಲ್ಲಿ ಪರ್ಯಾವಸನಗೊಂಡ ಘಟನೆ ಈಶಾನ್ಯ ಮುಂಬೈನಿಂದ ವರದಿಯಾಗಿದೆ.
20 ವರ್ಷದ ಅನುಪಮಾ ಆಚಾರ್ಯ ಕಳೆದ ಒಂದು ವರ್ಷದಿಂದ ಜೆಟ್ ಏರ್ವೇಸ್ ನಲ್ಲಿ ಗಗನಸಖಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಈಕೆ, ಪೈಲಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ತನ್ನ ಸಹದ್ಯೋಗಿ ಜೊತೆ ದಿಲ್ ದರ್ಶನ್ ಅನ್ನುವ ವಸತಿ ಸಮುಚ್ಚಯದ ಐದನೇ ಅಂತಸ್ತಿನಲ್ಲಿ ವಾಸವಾಗಿದ್ದರು. ವಿಪರೀತ ಧೂಮಪಾನದ ವ್ಯಸನಿಯಾಗಿದ್ದ ಅನುಪಮಾ ಮತ್ತು ಈಕೆಯ ಸಹದ್ಯೋಗಿ ಜೊತೆ ಇಂದು ಬೆಳಿಗ್ಗೆ ಸಿಗರೇಟು ಸೇದುವ ವಿಷಯದಲ್ಲಿ ಮಾತುಕತೆ ಬೆಳೆದು ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಈಕೆ ಐದನೇ ಅಂತಸ್ತಿನಿಂದ ಕೆಳಕ್ಕೆ ಹಾರಿದರು.
ತೀವ್ರವಾಗಿ ಗಾಯಗೊಂಡಿದ್ದ ಈಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲೇ ಕೊನೆಯುಸಿರೆಳೆದರು. ಪೊವೈ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಈಕೆ ಜೊತೆ ಇದ್ದ ಪೈಲಟ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, March 18, 2009, 17:59 [IST]