ಗ್ರಾಮೀಣ ಪ್ರತಿಭೆ ಗೆ ಪಿ ಇಎಸ್ ಸಂಸ್ಥೆ ಸಹಕಾರ
ಬೆಂಗಳೂರು, ಮಾ. 16: ಸರ್ಕಾರಿ ಶಾಲೆಗಳ ಗುಣಮಟ್ಟ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರು ಅಭಿಪ್ರಾಯ ಪಟ್ಟರು. ಅವರು ಪಿ.ಇ.ಎಸ್ ಸಂಸ್ಥೆಯ ಪ್ರತಿಭಾ ಪುರಸ್ಕಾರ 2008 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಎಂದ ಅವರು 21 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಪಿ ಬಲರಾಮ್ ಅವರು ಮಾತನಾಡಿ ಪ್ರಸಕ್ತ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿಯೂ ಅಭಿವೃದ್ಧಿ ಅತ್ಯವಶ್ಯಕವಾಗಿದೆ. ಭಾರತದಲ್ಲಿ ಪ್ರತಿ ವರ್ಷವೂ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿರುವುದು ಸಂತೋಷದಾಯಕ ವಿಷಯ; ಆರ್ಥಿಕ ಹಿಂಜರಿತದ ಈ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಕಂಗೆಡದೆ ಹೆಚ್ಚು ಹೆಚ್ಚಾಗಿ ತಮ್ಮನ್ನು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ತಿನ ಸದಸ್ಯರು ಹಾಗೂ ಪಿ.ಇ.ಎಸ್ ಸಂಸ್ಥೆಗಳ ಸ್ಥಾಪಕರಾದ ಪ್ರೊ. ಎಂ.ಆರ್.ದೊರೈಸ್ವಾಮಿ ಅವರು ಮಾತನಾಡಿ ಇಂದಿನ ಯುವಜನತೆ ಸಮಾಜದ ಆಸ್ತಿಯಂತೆ. ರಾಷ್ಟ್ರ ನಿರ್ಮಾಣದಲ್ಲಿ ಅವರಿಗೆ ಸೂಕ್ತ ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಅವಶ್ಯಕತೆಯಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕೋರ್ಸ್ಗಳಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 3831 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರು.37.38 ಲಕ್ಷಗಳಷ್ಟು ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಪಿ.ಇ.ಎಸ್
ಸಂಸ್ಥೆಗಳ
ಮುಖ್ಯ
ಕಾರ್ಯನಿರ್ವಹಣಾ
ಅಧಿಕಾರಿ
ಪ್ರೊ.ಡಿ.ಜವಹರ್
ಅವರು
ಸಮಾರಂಭದಲ್ಲಿ
ಉಪಸ್ಥಿತರಿದ್ದರು.
ಕಾಲೇಜಿನ
ಪ್ರಾಂಶುಪಾಲ
ಶ್ರೀ
ಮೂರ್ತಿ
ಅವರು
ಸ್ವಾಗತಿಸಿದರು.
ಕಾಲೇಜಿನ
ವಿದ್ಯಾರ್ಥಿನಿ
ಕುಮಾರಿ
ರಿತಿಷಾ
ಪದ್ಮನಾಭ
ಅವರಿಂದ
ಪ್ರಾರ್ಥನೆ
ನಡೆಯಿತು.
(ದಟ್ಸ್
ಕನ್ನಡ
ವಾರ್ತೆ)