ಮುಂಡಗೋಡದಲ್ಲಿ ಕಲ್ಲು ತೂರಾಟ, ಪರಿಸ್ಥಿತಿ ಉದ್ವಿಗ್ನ
ಹೋಳಿ ಅಂಗವಾಗಿ ಹಳ್ಳೂರಿನಿಂದ ಕಾಮನ ಮೆರವಣಿಗೆ ಸಾಗುತ್ತಿತ್ತು. ಮೆರವಣಿಗೆ ಯಲ್ಲಾಪುರ ರಸ್ತೆಯ ಬಸ್ತಿಕಟ್ಟೆ ಬಳಿ ಬಂದಾಗ ಪ್ರಾರ್ಥನಾ ಮಂದಿರದಿಂದ ಕೆಲವರು ಚಪ್ಪಲಿ ತೂರಿದರು. ಇದರ ಹಿಂದೆಯೇ ಮೆರವಣಿಗೆ ಮೇಲೆ ನೂರಾರು ಕಲ್ಲುಗಳು ತೂರಿಬಂದವು. ಕಲ್ಲು ತೂರಾಟದಲ್ಲಿ ಕಾಮಣ್ಣನ ಮೂರ್ತಿ ಭಗ್ನಗೊಂಡಿತು. ಮೆರವಣಿಗೆಯಲ್ಲಿ ಸಾಗುತ್ತಿದ್ದವರು ಕೆರಳಿ ಪ್ರತಿಕಾರವಾಗಿ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ ಆರಂಭಿಸಿದರು.
ಸುದ್ದಿ ತಿಳಿದ ತಕ್ಷಣ ಎರಡು ಕೋಮಿನ ಸಾವಿರಾರು ಮಂದಿ ಕೋಲು, ದೊಣ್ಣೆ ಹಿಡಿದು ಹಿಂಸಾಚಾರಕ್ಕಿಳಿದರು. ಗಲಭೆಯಲ್ಲಿ ಕೆಲವು ಗೂಡಂಗಡಿಗಳು ವಾಹನಗಳು ಧ್ವಂಸಗೊಂಡವು. ಪ್ರಾರ್ಥನಾ ಮಂದಿರದ ಗಾಜುಗಳು ಪುಡಿಪುಡಿಯಾದವು. ಬಸ್ ನಿಲ್ದಾಣದ ಬಳಿ ಬಸ್ಸೊಂದಕ್ಕೆ ಕೆಲವರು ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ವಿಫಲಗೊಳಿಸಿದರು. ಕೆಲವೇ ಗಂಟೆಗಳಲ್ಲಿ ಗಲಭೆ ಇಡೀ ಪಟ್ಟಣಕ್ಕೆ ವ್ಯಾಪಿಸಿತು. ಘಟನೆ ಖಂಡಿಸಿ ಹಿಂದೂ ಸಂಘಟನೆಗಳು ಇಂದು ಮುಂಡಗೋಡ ಬಂದ್ ಗೆ ಕೆರೆ ನೀಡಿವೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಹಿಂದೂಗಳು
ಭಯೋತ್ಪಾದಕರು,
ಫಾದರ್
ಹೋಳಿ
ಆಚರಿಸೋಣು,
ಓಕುಳಿ
ಎರಚೋಣು
ಬರ್ರಿ