ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರ್ಯಾಗಿಂಗ್, ಆಂಧ್ರ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ
ಗುಂಟೂರಿನ ಬಾಪತ್ಲಾ ಪಟ್ಟಣದಲ್ಲಿರುವ ಸರ್ಕಾರಿ ಕೃಷಿ ಇಂಜಿನಿಯರಿಂಗ್ ಕಾಲೇಜ್ ಪ್ರಥಮ ವರ್ಷದ 20 ರ ಹರೆಯದ ಕೃಷಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಗೆ ಹಿರಿಯ ವಿದ್ಯಾರ್ಥಿನಿಯರು ಬೆತ್ತಲೆಯಾಗಿ ಕುಣಿ ಎಂದು ಪೀಡಿಸಿದ್ದಾರೆ. ಇದರಿಂದ ತೀವ್ರವಾಗಿ ಬೇಸತ್ತ ಆಕೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷಯ ತಿಳಿದ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಹಿಮಾಚಲ ಪ್ರದೇಶದ ರಾಜೇಂದ್ರ ಪ್ರಸಾದ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಮನ್ ಕುಚ್ರೋ ಎಂಬ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ರ್ಯಾಗಿಂಗ್ ಗೆ ಮೃತಪಟ್ಟಿದ್ದ. ಇದರ ಬೆನ್ನಲ್ಲೇ ಮತ್ತೊಂದು ಇಂತಹ ಘಟನೆ ಜರುಗಿದ್ದು, ತೀವ್ರ ಚರ್ಚೆ ವಿಷಯವಾಗಿದೆ.
(ದಟ್ಸ್
ಕನ್ನಡ
ವಾರ್ತೆ)
ರ್ಯಾಗ್
ಮಾಡುವವರಿಗೆ
ಯಾವ
ಶಿಕ್ಷೆ
ನೀಡಬೇಕು?
Comments
ಹೈದರಾಬಾದ್ suicide ಆಂಧ್ರ ಪ್ರದೇಶ hyderabad ragging himachal pradesh aman kachroo ಹಿಮಾಚಲ ಪ್ರದೇಶ ರ್ಯಾಗಿಂಗ್ ಅತ್ಮಹತ್ಯೆ
Story first published: Friday, March 13, 2009, 11:05 [IST]