ಸತ್ಯಂ ಖರೀದಿಗೆ ಐಗೇಟ್ ಒಲವು: ಫಣೀಶ್ ಮೂರ್ತಿ
ಮುಂಬೈ, ಮಾ. 13 : ವಂಚನೆಗೆ ಒಳಗಾಗಿರುವ ಸತ್ಯಂ ಕಂಪ್ಯೂಟರ್ಸ್ ಕಂಪನಿಯ ಖರೀದಿ ಪ್ರಕ್ರಿಯೆ ಕಳೆದ ಒಂದು ವಾರದಿಂದ ನಡೆಯುತ್ತಿದ್ದು, ಇದೀಗ ಸಾಫ್ಚ್ ವೇರ್ ಹೊರಗುತ್ತಿಗೆ ಕಾರ್ಯದಲ್ಲಿ ತನ್ನದೇ ಸ್ಥಾನವನ್ನು ಕಲ್ಪಿಸಿಕೊಂಡಿರುವ ಐಗೇಟ್ ಕಂಪನಿಯೂ ಸತ್ಯಂ ಖರೀದಿಸಲು ಮುಂದೆ ಬಂದಿದೆ.
ಸತ್ಯಂ ಕಂಪನಿಯಲ್ಲಿ ಅವ್ಯವಹಾರ ಕಂಡು ಬಂದ ನಂತರ ಕೇಂದ್ರ ಸರ್ಕಾರ ನಾಸ್ಕಾಂ ಮಾಜಿ ಅಧ್ಯಕ್ಷ ಕಿರಣ್ ಕಾರ್ಣೀಕ್ ನೇತೃತ್ವದ ನೂತನ ಆಡಳಿತ ರಚಿಸಿದೆ. ಈ ಆಡಳಿತಗೆ ಐಗೇಟ್ ಕಂಪನಿಯ ಖರೀದಿಸುವ ಕುರಿತು ಒಲವನ್ನು ವ್ಯಕ್ತಪಡಿಸಿದ್ದು, ಕಳೆದ ವರ್ಷದ ಡಿಸೆಂಬರ್ ಹಾಗೂ ಈ ವರ್ಷದ ಜನವರಿ, ಫೆಬ್ರುವರಿ ತಿಂಗಳಿನ ಆರ್ಥಿಕ ವ್ಯವಹಾರಗಳ ಕಾಗದಪತ್ರಗಳನ್ನು ಕೇಳಿದೆ. ಸದ್ಯ ಕಂಪನಿಯ ಸ್ಥಿತಿ, ಆಗಿರುವ ವ್ಯವಹಾರಗಳ, ಒಟ್ಟು ಮೌಲ್ಯ ಇನ್ನಿತರ ಮಹತ್ವದ ದಾಖಲೆಗಳನ್ನು ಸತ್ಯಂ ಆಡಳಿತ ಮಂಡಳಿಗೆ ಕೇಳಲಾಗಿದೆ ಎಂದು ಐಗೇಟ್ ಕಂಪನಿಯ ಮೂಲಗಳು ತಿಳಿಸಿವೆ.
ಇದಕ್ಕೊ ಮೊದಲು, ಸ್ಪೈಸ್ ಟೆಲಿಕಾಂ, ಎಲ್ ಅಂಡ್ ಟಿ ಹಾಗೂ ಐಬಿಎಂ ಕಂಪನಿಗಳು ಸತ್ಯಂ ಕಂಪನಿಯನ್ನು ಖರೀದಿಸಬಹುದು ಎಂದು ಅಂದಾಜಿಸಲಾಗಿತ್ತು. ಐಗೇಟ್ ಕಂಪನಿಯ ನಿರ್ಧಾರ ಕೂಡ ಅಂತಿಮವಾಗಿಲ್ಲ. ಮೊದಲು ಒಲವು ತೋರಿಸಿದ ಐಗೇಟ್ ನಂತರ ಖರೀದಿ ನಿರ್ಧಾರವನ್ನು ಕೈಬಿಟ್ಟಿತು ಎಂದು ಗಾಳಿ ಸುದ್ದಿಯೂ ಹಬ್ಬಿದೆ.
(ದಟ್ಸ್
ಕನ್ನಡ
ವಾರ್ತೆ)
ಸತ್ಯಂ
ಖರೀದಿಸಲು
ಐಬಿಎಂ
ಒಲವು
ರಾಜ್ಯದ
ಐಟಿ
ರಫ್ತಿನಲ್ಲಿ
ಶೇ.
5
ರಷ್ಟು
ಕುಸಿತ