ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಕಿತ್ತೊಗೆಯಲು ತೃತೀಯ ರಂಗದ ಸಮಾವೇಶ

By Staff
|
Google Oneindia Kannada News

Throw Communal forcesfrom state urges Devegowda
ದಾಬಸ್ ಪೇಟೆ, ಮಾ. 12 : ಕರ್ನಾಟಕದಲ್ಲಿ ಬೇರುಬಿಟ್ಟಿರುವ ಕೋಮುವಾದಿ ಬಿಜೆಪಿ ಪಕ್ಷವನ್ನು ರಾಜ್ಯದ ಅಧಿಕಾರ ಚುಕ್ಕಾಣಿಯಿಂದ ಕಿತ್ತೊಗೆಯಬೇಕು ಜೊತೆಗೆ ದೇಶದ ರಾಜಕೀಯ ಇತಿಹಾಸದಿಂದ ಶಾಶ್ವತವಾಗಿ ಬಿಜೆಪಿಯನ್ನು ಅಳಸಿ ಹಾಕಲು ತೃತೀಯ ರಂಗ ಹುಟ್ಟಿಕೊಂಡು ತನ್ನ ಪ್ರಥಮ ಮಹತ್ವದ ಸಮಾವೇಶವನ್ನು ರಾಜ್ಯದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಸ್ಪಷ್ಟಪಡಿಸಿದರು. ನಿಮ್ಮಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ. ಬಿಜೆಪಿ ಮುಕ್ತಿ ರಾಜ್ಯವಾಗಿ ಪರಿವರ್ತಿಸೋಣ ಎಂದು ಗೌಡರು ಹೇಳಿದರು.

ದಾಬಸ್ ಪೇಟೆಯಲ್ಲಿ ಏರ್ಪಡಿಸಲಾಗಿರುವ ತೃತೀಯ ರಂಗದ ಬೃಹತ್ ಸಮಾವೇಶದ ಉದ್ಘಾಟನೆ ಮಾಡಿ ನಂತರ ಅವರು, ಎನ್ ಡಿಎ, ಯಪಿಎದಿಂದ ದೇಶದ ಅಧಃಪತನ ಕಂಡಿದೆ ಎಂದರು. ಇಂದಿನ ದಾಬಸ್ ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿರುವ ಸಮಾವೇಶಕ್ಕೆ ಬಾರಿ ಮಹತ್ವವಿದೆ. ಘಟಾನುಘಟಿ ನಾಯಕರು ಇಂದು ಪಾಲ್ಗೊಂಡಿದ್ದಾರೆ. ಬಿಎಸ್ಪಿ ನಾಯಕ ಸತೀಶ್ ಮಿಶ್ರಾ, ಎಡಪಕ್ಷಗಳ ನಾಯಕರಾದ ಎಬಿ ಬರ್ಧನ್, ಪ್ರಕಾಶ್ ಕಾರಟ್, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ಇಂದು ಸೇರಿದ್ದರಿಂದ ದೇಶದ ಪ್ರಮುಖ ನಾಯಕರಿಗೆ ನಡುಕ ಹುಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಮುಖಂರ ಮುಖದಲ್ಲಿ ನೀರಿಳಿದಿದೆ ಎಂದು ಟೀಕಿಸಿದರು.

(ದಟ್ಸ್ ಕನ್ನಡ ವಾರ್ತೆ)
ತೃತೀಯ ರಂಗದ ಸಮಾವೇಶಕ್ಕೆ ದೇವೇಗೌಡ ಚಾಲನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X