ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೆಡಿಎಸ್ ಸಾರಥ್ಯದಲ್ಲಿ ತೃತೀಯ ರಂಗಕ್ಕೆ ಚಾಲನೆ
ತೃತೀಯ ರಂಗದಲ್ಲಿ ಎಡಪಕ್ಷಗಳ ಮುಖಂಡರಾದ ಪ್ರಕಾಶ್ ಕಾರಟ್, ಎ ಬಿ ಬರ್ಧನ್, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬ ನಾಯ್ಡು, ಎಐಎಡಿಎಂಕೆ ನಾಯಕಿ ಜಯಲಲಿತಾ, ತೆಲಂಗಾಣ ರಾಷ್ಟ್ರೀಯ ಸಮಿತಿಯ ಚಂದ್ರಶೇಖರರಾವ್ ಅವರಂತಹ ಘಟಾನುಘಟಿ ನಾಯಕರಲ್ಲದೆ, ಫಾರ್ವರ್ಡ್ ಬ್ಲಾಕ್, ಆರ್ ಪಿಐ ಪಕ್ಷಗಳು ತೃತೀಯ ರಂಗದಲ್ಲಿ ಗುರುತಿಸಿಕೊಂಡಿವೆ. ಇಂದು ಈ ನಾಯಕರೆಲ್ಲಾ ಸಮಾವೇಶಕ್ಕೆ ಆಗಮಿಸುವ ಸಾಧ್ಯತೆಗಳಿವೆ.
ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದ್ದು, ಅವರ ಪ್ರತಿನಿಧಿ ಡಾ ಮೈತ್ರೇಯನ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಪರವಾಗಿ ಅವರ ಸರ್ಕಾರದ ಉಪಮುಖ್ಯಮಂತ್ರಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಬಸ್ ಪೇಟೆ ಬಳಿಯ ಬಿಪಿಎಲ್ ಗೆ ಸೇರಿದ 120 ಎಕರೆ ಪ್ರದೇಶದಲ್ಲಿ ಸಮಾವೇಶಕ್ಕೆ ಎಲ್ಲ ಸಿದ್ಧೆತೆಗಳನ್ನು ಮಾಡಿಕೊಂಡಿದ್ದು, ರಾಜ್ಯ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದೆ.
(ದಟ್ಸ್ ಕನ್ನಡ ವಾರ್ತೆ)
Comments
ದೇವೇಗೌಡ ತೃತೀಯ ರಂಗ ಚಂದ್ರಬಾಬು ನಾಯ್ಡು ಯುಪಿಎ upa ಕನ್ನಡ hd kumaraswamy ls polls 2009 ಎನ್ ಡಿಎ ಮಯಾವತಿ ಪ್ರಕಾಶ್ ಕಾರಟ್ ಲೋಕಸಭೆ ಚುನಾವಣೆ 2009
Story first published: Thursday, March 12, 2009, 10:40 [IST]