ಬಿಜೆಪಿ ಸೋಲಿಸಲು ಪ್ರಕಾಶ್ ಕಾರಟ್ ಮನವಿ
ದಾಬಸ್ ಪೇಟೆಯಲ್ಲಿ ಆಯೋಜಿಸಲಾಗಿರುವ ತೃತೀಯ ರಂಗದ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕನ್ನಡಿಗರೆ ನಿಮ್ಮಲ್ಲಿ ನನ್ನದೊಂದು ಕಳಕಳಿಯ ವಿನಂತಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ ಎಂದು ಮನವಿ ಮಾಡಿಕೊಂಡರು. ನಾವೆಲ್ಲರೂ ಸೇರಿ ಶಾಂತಿ ಸೌಹಾರ್ದಯುತ ದೇಶ ಕಟ್ಟೋಣ ಎಂದು ಕಾರಟ್ ಹೇಳಿದರು.
ಕರ್ನಾಟಕವನ್ನು ಇನ್ನೊಂದು ಗುಜರಾತ ಮಾಡಲು ಬಿಡುವುದಿಲ್ಲ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಆರು ಕಳೆದಿಲ್ಲ. ಆಗಲೇ ರಾಜ್ಯ ಏನೆಲ್ಲಾ ಘಟನೆಗಳು ಸಂಭವಿಸಿವೆ. ಒಂದು ಸಾರಿ ಆತ್ಮಾವಲೋಕನ ಮಾಡಿಕೊಂಡು, ನಿಮ್ಮ ಅಮೂಲ್ಯ ಮತ ಚಲಾಯಿಸಿ ಎಂದ ಸಲಹೆ ನೀಡಿದ ಅವರು, ಕರ್ನಾಟಕದಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ದೇವೇಗೌಡರೊಂದಿಗೆ ಹೋರಾಟ ಆರಂಭಿಸುವುದಾಗಿ ಹೇಳಿದರು.
ಎನ್ ಡಿಎ ಹಾಗೂ ಯುಪಿಎಗೆ ತೃತೀಯ ರಂಗ ಪರ್ಯಾಯ ಶಕ್ತಿ, ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದಿಂದ ಬೇಸತ್ತಿರುವ ಜನರು ತೃತೀಯರಂಗದ ಕಡೆಗೆ ವಾಲುತ್ತಿದ್ದಾರೆ ಎಂದು ಹೇಳಿದರು. ಯುಪಿಎ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನಿರುದ್ಯೋಗಿ ಸಮಸ್ಯೆ ಬೃಹದಾಕಾರವಾಗಿ ಬೆಳೆಗಿದೆ. ಆರ್ಥಿಕ ಹಿಂಜರಿತವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿಲ್ಲ. ದೇಶ ವಿರೋಧಿ ಪರಮಾಣ ಒಪ್ಪಂದ ಮಾಡಿಕೊಂಡಿದ್ದಾರೆ. ಬ್ಯಾಂಕುಗಳ ಖಾಸಗೀಕರಣ ಎಲ್ಲವೂ ಜನವಿರೋಧಿ ಕೆಲಸಗಳೆ ಎಂದು ಕಾರಟ್ ಯುಪಿಎ ಸರ್ಕಾರದ ಮೇಲೆ ಮುಗಿಬಿದ್ದರು.
(ದಟ್ಸ್
ಕನ್ನಡ
ವಾರ್ತೆ)
ಬಿಜೆಪಿ
ಕಿತ್ತೊಗೆಯಲು
ತೃತೀಯ
ರಂಗದ
ಸಮಾವೇಶ