ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಲ್ಲೂರಿನಲ್ಲಿ ಯಾಗ ನೆರವೇರಿಸಿದ ರಾಘವೇಂದ್ರ
ಕುಂದಾಪುರ, ಮಾ. 11 : ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ರಾಘವೇಂದ್ರ ಕೊಲ್ಲೂರು ಮೂಕಾಂಬಿಕೆ ದೇವಾಲಯದಲ್ಲಿ ಮಂಗಳವಾರ ಚಂಡಿಕಾಯಾಗ ನೆರವೇರಿಸಿದರು.
ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ಈ ಶ್ರೀಕ್ಷೇತ್ರಕ್ಕೆ ಆಗಮಿಸಿದ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕೊಲ್ಲೂರಿನಿಂದಲೇ ಚುನಾವಣೆ ಪ್ರಚಾರ ಕಾರ್ಯ ಆರಂಭಿಸುವ ಸಂಕಲ್ಪ ತೊಟ್ಟ ಅವರು ಮಾರ್ಚ್ 12 ರಿಂದ ಬೈಂದೂರು ಕ್ಷೇತ್ರದಲ್ಲಿ ಪ್ರವಾಸ ನಡೆಸುವುದಾಗಿ ಪಕ್ಷದ ಸ್ಥಳೀಯ ಮುಖಂಡರು ತಿಳಿಸಿದ್ದಾರೆ. ದೇವಳದ ಆಡಳಿತ ಮೊಕ್ತೇಸರ ಕೃಷ್ಣಪ್ರಸಾದ್ ಅಡ್ಯಂತಾಯರು ರಾಘವೇಂದ್ರ ಅವರನ್ನು ಬರಮಾಡಿಕೊಂಡರು.
(ದಟ್ಸ್ ಕನ್ನಡ ವಾರ್ತೆ)
Comments
bjp ಬಿಜೆಪಿ ಯಡಿಯೂರಪ್ಪ ಶಿವಮೊಗ್ಗ ls polls 2009 ರಾಘವೇಂದ್ರ b y raghavendra ಕೊಲ್ಲೂರು ಬೈಂದೂರು ಲೋಕಸಭೆ ಚುನಾವಣೆ 2009 shivamogga
Story first published: Wednesday, March 11, 2009, 11:09 [IST]