ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು ಸ್ಫೋಟ: ಪ್ರಮುಖ ಉಗ್ರನ ಸೆರೆ
ಸರ್ಫರೋಜ್ ನವಾಜ್ ಮೂಲತಃ ಕೇರಳದ ಎರ್ನಾಕುಲಂನವನು. ಈತ 2007ರಲ್ಲಿ ಬಾಂಗ್ಲಾ ಮೂಲಕ ಭಾರತ ಪ್ರವೇಶಿಸಿದ್ದ. ಲಷ್ಕರ್ ನಂತಹ ಉಗ್ರವಾದಿ ಸಂಘಟನೆಗಳ ಸಂಪರ್ಕವನ್ನು ಈತ ಹೊಂದಿದ್ದು ಸಿಮಿ ಕಾರ್ಯನಾಗಿಯೂ ಸಕ್ರಿಯನಾಗಿದ್ದ. ಕೆಲ ಕಾಲ ಸಿಮಿ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದ.
ಜುಲೈ 25, 2008ರಲ್ಲಿ ನಡೆದ ಬೆಂಗಳೂರು ಸ್ಫೋಟದಲ್ಲಿ ನವಾಜ್ ಭಾಗಿಯಾಗಿ, ಸ್ಫೋಟಕಗಳನ್ನು ಎಲ್ಲೆಲ್ಲಿ ಇಡಬೇಕು ಎಂಬುದನ್ನೂ ಈತನೇ ನಿರ್ಧರಿಸಿದ್ದ. ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ತರಬೇತಿ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನವಾಜ್ ಇನ್ನೂ ಯಾವ್ಯಾವ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬುದು ಪೊಲೀಸ್ ತನಿಖೆಯಿಂದ ಸಾಬೀತಾಗಬೇಕಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, March 7, 2009, 14:27 [IST]