ಕಿವಿ ಪ್ರಧಾನಿ ಜತೆ ಧೋನಿ ಪಡೆ ಔತಣಕೂಟ
ವೆಲ್ಲಿಂಗ್ಟನ್, ಮಾ. 6 : ಪ್ರವಾಸಿ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ನ್ಯೂಜಿಲ್ಯಾಂಡ್ ಪ್ರಧಾನಿ ಜಾನ್ ಕೀ ಗುರುವಾರ ಔತಣಕೂಟ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಡೇನಿಯಲ್ ವೆಟ್ಟೋರಿ ನೇತೃತ್ವದ ರಾಷ್ಟ್ರೀಯ ತಂಡ ಸಹ ಪಾಲ್ಗೊಂಡಿತ್ತು.
ಉಭಯ ಆಟಗಾರರನ್ನು ಸ್ವಾಗತಿಸಿ ಮಾತನಾಡಿದ ಜಾನ್ ಕೀ, ಮಂಗಳವಾರ ಲಾಹೋರ್ ನಲ್ಲಿ ಶ್ರೀಲಂಕಾ ಆಟಗಾರರ ಮೇಲಿನ ಗುಂಡಿನ ದಾಳಿಯನ್ನು ಖಂಡಿಸಿದರು. ಕ್ರಿಕೆಟ್ ಸಭ್ಯರ ಆಟವಾಗಿದ್ದು, ಉಗ್ರರ ಕೆಂಗಣ್ಣು ರಾಷ್ಟ್ರೀಯ ತಂಡಗಳ ಮೇಲೆ ಬಿದ್ದಿರುವುದು ದುರದೃಷ್ಟಕರ ಎಂದರು. ಇಂತಹ ಸಂದರ್ಭದಲ್ಲಿ ಆಯೋಜಕರು ಪಂದ್ಯಗಳಿಗೆ ಗರಿಷ್ಠ ಮಟ್ಟದ ಭದ್ರತೆ ವ್ಯವಸ್ಥೆಗೊಳಿಸಬೇಕು ಎಂದರು.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರನ್ನು ಸ್ಮರಿಸಿದ ಪ್ರಧಾನಿ ಕೀ, 1990 ರಲ್ಲಿ ರಿಚರ್ಡ್ ಹ್ಯಾಡ್ಲಿ 400 ವಿಕೆಟ್ ಪಡೆದ ಸಂದರ್ಭದಲ್ಲಿ ಸಂಜಯ ಮಂಜ್ರೇಕರ್ ನೇತೃತ್ವದ ಭಾರತೀಯ ಆಟಗಾರರು 400 ಗುಲಾಬಿಯನ್ನು ನೀಡಿ ಅಭಿನಂದಿಸಿದ ಘಟನೆಯನ್ನು ನೆನಪಿಸಿಕೊಂಡರು. ಇದೇ ವೇಳೆ ಪ್ರವಾಸಿ ತಂಡದ ಮಾಜಿ ಕೋಚ್ ನ್ಯೂಜಿಲ್ಯಾಂಡ್ ನ ಜಾನ್ ರೈಟ್ ಸೇವೆಯನ್ನು ಪ್ರಶಂಸಿಸಿದರು.
(ದಟ್ಸ್ ಕನ್ನಡ ಕ್ರೀಡಾ ವಾರ್ತೆ)
ನೇಪಿಯರ್ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು