ಲೋಕಸಭಾ ಚುನಾವಣೆ ಸಮಗ್ರ ವೇಳಾಪಟ್ಟಿ
ಮೊದಲ ಹಂತ
ಮೊದಲ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಿಜಾಪುರ (ಪರಿಶಿಷ್ಟ ಜಾತಿ), ಗುಲ್ಬರ್ಗಾ (ಪ.ಜಾ.) ರಾಯಚೂರು (ಪ.ಪಂಗಡ), ಬೀದರ್, ಕೊಪ್ಪಳ, ಬಳ್ಳಾರಿ (ಪ.ಪಂಗಡ), ಉತ್ತರ ಕನ್ನಡ ಚಿತ್ರದುರ್ಗ (ಪ.ಜಾತಿ), ತುಮಕೂರು, ಬೆಂಗಳೂರು ಗ್ರಾಮಾಂತರ ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ(ಪ.ಜಾತಿ) ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಈ 17 ಕ್ಷೇತ್ರಗಳ ಚುನಾವಣೆಯ ವೇಳಾಪಟ್ಟಿ ಹೀಗಿದೆ.
ಅಧಿಸೂಚನೆ
ಹೊರಡಿಸುವ
ದಿನಾಂಕ
28-3-2009
ನಾಮಪತ್ರ
ಸಲ್ಲಿಸಲು
ಕೊನೆಯ
ದಿನಾಂಕ
4-4-2009
ನಾಮಪತ್ರಗಳ
ಪರಿಶೀಲನೆ
ದಿನಾಂಕ
6-4-2009
ಉಮೇದುವಾರಿಕೆ
ಹಿಂತೆಗೆದುಕೊಳ್ಳಲು
ಕೊನೆಯ
ದಿನಾಂಕ
8-4-2009
ಮತದಾನದ
ದಿನಾಂಕ
23-4-2009
ಗುರುವಾರ
ಮತ
ಎಣಿಕೆ
ದಿನಾಂಕ
16-5-2009
ಚುನಾವಣಾ
ಪ್ರಕ್ರಿಯೆ
ಪೂರ್ಣಗೊಳ್ಳುವ
ದಿನಾಂಕ
28-5-2009
ಮೊದಲ ಹಂತದಲ್ಲಿ ನಾಮಪತ್ರಗಳನ್ನು 28-3-2009 ರಿಂದ 4-4-2009 ರವರೆಗೆ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನೆಗೋಷಿಯೇಬಲ್ ಇನ್ಸ್ಸ್ರುಮೆಂಟ್ ಕಾಯ್ದೆಯಡಿ ಘೋಷಿಸಲ್ಪಟ್ಟ ಸಾರ್ವತ್ರಿಕ ರಜಾ ದಿನ ಭಾನುವಾರ ದಿನಾಂಕ 29-3-2009 ನ್ನು ಹೊರಡುಪಡಿಸಿ ಚುನಾವಣಾಧಿಕಾರಿಯವರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿಯವರಿಗೆ ಚುನಾವಣಾ ಅಧಿಕಾರಿಯವರ ಕಛೇರಿಯಲ್ಲಿ ಸಲ್ಲಿಸಬಹುದು.
ಎರಡನೇ ಹಂತ
ಎರಡನೇ ಹಂತದಲ್ಲಿ ಬಾಗಲಕೋಟೆ, ಹಾವೇರಿ, ಧಾರವಾಡ, ದಾವಣಗೆರೆ, ಶಿವಮೊಗ್ಗೆ, ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ (ಪ.ಜಾತಿ) ಒಟ್ಟು 11 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಎರಡನೇ
ಹಂತದ
ಚುನಾವಣಾ
ವೇಳಾಪಟ್ಟಿ
ಹೀಗಿದೆ.
ಅಧಿಸೂಚನೆ
ಹೊರಡಿಸುವ
ದಿನಾಂಕ
2-4-2009
ನಾಮಪತ್ರ
ಸಲ್ಲಿಸಲು
ಕೊನೆಯ
ದಿನಾಂಕ
9-4-2009
ನಾಮಪತ್ರಗಳ
ಪರಿಶೀಲನೆ
ದಿನಾಂಕ
11-4-2009
ಉಮೇದುವಾರಿಕೆ
ಹಿಂತೆಗೆದುಕೊಳ್ಳಲು
ಕೊನೆಯ
ದಿನಾಂಕ
13-4-2009
ಮತದಾನದ
ದಿನಾಂಕ
30-4-2009
ಮತ
ಎಣಿಕೆ
ದಿನಾಂಕ
16-5-2009
ಚುನಾವಣೆ
ಪ್ರಕ್ರಿಯೆ
ಪೂರ್ಣಗೊಳಿಸುವ
ದಿನಾಂಕ
28-5-2009
ಎರಡನೇ ಹಂತದಲ್ಲಿ ನಾಮಪತ್ರಗಳನ್ನು 2-4-2009 ರಿಂದ 9-4-2009 ರವರೆಗೆ ಸಾರ್ವತ್ರಿಕ ರಜಾ ದಿನಗಳಾದ 5-4-2009, 7-4-2009 ನ್ನು ಹೊರತುಪಡಿಸಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಉಮೇದುವಾರರು ಅಥವಾ ಅವರ ಸೂಚಕರಲ್ಲಿ ಯಾರಾದರೊಬ್ಬರು ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯವರಿಗೆ ಖುದ್ದಾಗಿ ಚುನಾವಣಾಧಿಕಾರಿಯವರ ಕಛೇರಿಯಲ್ಲಿ ಸಲ್ಲಿಸಬಹುದು.
ಈ ಸಾರ್ವತ್ರಿಕ ಚುನಾವಣೆಗಳಲ್ಲಿ ದಿನಾಂಕ 1-1-2009 ರಂದು ಅರ್ಹತಾ ದಿನಾಂಕವೆಂದು ಪರಿಗಣಿಸಿ ತಯಾರಿಸಲಾದ ಫೋಟೋ ಮತದಾರರ ಪಟ್ಟಿಗಳನ್ನು ಬಳಸಲಾಗುವುದು. ಈ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಲಾಗುವುದು. ಮಾದರಿ ನೀತಿ ಸಂಹಿತೆಯು ಮಾರ್ಚ್ 2 ರಿಂದಲೇ ಜಾರಿಗೆ ಬಂದಿರುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಯವರು ತಿಳಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಲೋಕಸಭೆ
ಚುನಾವಣೆಗೆ
ಸಕಲ
ಸಿದ್ಧತೆ,
ವಿದ್ಯಾಶಂಕರ್
ಕರ್ನಾಟಕದಲ್ಲಿ
ಏ.23
ಹಾಗೂ
30
ರಂದು
ಚುನಾವಣೆ