ಅಸೋಮ್ ಗಣ ಪರಿಷತ್, ಶಿವಸೇನೆ ಜೊತೆ ಮೈತ್ರಿ
ನವದೆಹಲಿ, ಮಾ. 5 : ಲೋಕಸಭೆ ಚುನಾವಣೆ ದಿನಾಂಕಗಳು ಘೋಷಣೆ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳತೊಡಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಹಾಗೂ ಅಸ್ಸಾಂನಲ್ಲಿ ಅಸೋಮ್ ಗಣ ಪರಿಷತ್ ನೊಂದಿಗೆ ಗುರುವಾರ ಮೈತ್ರಿ ಮಾಡಿಕೊಂಡಿದೆ.
ಅಸ್ಸಾಂನ 14 ಲೋಕಸಭೆ ಕ್ಷೇತ್ರಗಳಲ್ಲಿ 8 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಉಳಿದ 6 ಕ್ಷೇತ್ರಗಳಲ್ಲಿ ಅಸೋಮ್ ಗಣ ಪರಿಷತ್ ಸ್ಪರ್ಧಿಸಲಿದ್ದು, ಜಂಟಿಯಾಗಿ ಚುನಾವಣೆ ಎದುರಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ, ಸುಷ್ಮಾ ಸ್ವರಾಜ್, ಶರದ್ ಯಾದವ್ ಹಾಗೂ ಅಸೋಮ್ ಗಣ ಪರಿಷತ್ ನ ಅಧ್ಯಕ್ಷ ಚಂದ್ರ ಮೋಹನ್ ಪಟವಾರಿ ಉಪಸ್ಥಿತರಿದ್ದರು.
ಶಿವಸೇನೆಯೊಂದಿಗೆ ಮೈತ್ರಿ
ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೂ ಕೂಡ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, 26 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲಿದೆ. ಉಳಿದ 22 ಕ್ಷೇತ್ರಗಳಲ್ಲಿ ಶಿವಸೇನೆ ಕಣಕ್ಕಿಳಿಯಲು ಸಮ್ಮತಿಸಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶಿವಸೇನೆ ಮುಖಂಡ ಬಾಳಾ ಠಾಕ್ರೆ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದು ಕೂಡಾ ಬಿಜೆಪಿ-ಶಿವಸೇನೆ ಮೈತ್ರಿಗೆ ಶಕ್ತಿ ಬಂದಂತಾಗಿದೆ ಎಂದು ರಾಜಕೀಯ ವಲಯದ ಅಭಿಪ್ರಾಯವಾಗಿದೆ.
(ದಟ್ಸ್
ಕನ್ನಡ
ವಾರ್ತೆ)
ಸೈಕಲ್
ಹಿಡಿದ
ಕೈ,
ಎನ್
ಡಿಎ
ತೆಕ್ಕೆಗೆ
ಆರ್ಎಲ್
ಡಿ