ಟಿಸಿಎಸ್ ಉದ್ಯೋಗಿಗಳ ಸಂಬಳ ಹೆಚ್ಚಳವಿಲ್ಲ, ರಾಮದೊರೈ
ಮುಂಬೈ, ಫೆ. 26 : ಜಾಗತಿಕ ಮಾರುಕಟ್ಟೆ ಆರ್ಥಿಕ ಕುಸಿತ ಇದೀಗ ದೇಶದ ದೊಡ್ಡ ಸಾಫ್ಟ್ ವೇರ್ ಕಂಪನಿಯ ಎಂದೇ ಖ್ಯಾತಿ ಪಡೆದಿರುವ ಟಾಟಾ ಕನ್ಸ್ ಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಬಿಸಿ ತಾಗಿದೆ. ಕಾಸ್ಟ್ ಕಟಿಂಗ್ ಗೆ ಮುಂದಾಗಿರುವ ಕಂಪನಿಯೂ ಸಾಧ್ಯವಾದರೆ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಚಿಂತನೆ ನಡೆಸಿದೆ.
ಟಿಸಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಮದೊರೈ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಕಂಪನಿ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕಾಸ್ಟ್ ಕಟಿಂಗ್ ಗೆ ಮುಂದಾಗಿದ್ದು, ಅಗತ್ಯ ಬಿದ್ದರೆ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಈ ವರ್ಷ ಕಂಪನಿಯ ಉದ್ಯೋಗಿಗಳಿಗೆ ಯಾವುದೇ ಕಾರಣ ಸಂಬಳ ಹೆಚ್ಚಳವಿಲ್ಲ ಎಂದು ರಾಮದೊರೈ ಸ್ಪಷ್ಟಪಡಿಸಿದ್ದಾರೆ. ಕಂಪನಿಯಲ್ಲಿರುವ ನೌಕರರ ಕ್ರಮಾಂಕದ ಅನುಗುಣವಾಗಿ ಶೇ. 22 ರಿಂದ 35 ರಷ್ಟು ಸಂಬಳ ಕಡಿತಗೊಳಿಸುವ ಸುದ್ದಿಯೂ ದಟ್ಟವಾಗಿದೆ ಎನ್ನಲಾಗಿದೆ.
(ದಟ್ಸ್
ಕನ್ನಡ
ವಾರ್ತೆ)
2
ವರ್ಷಗಳಲ್ಲಿ
ಆರ್ಥಿಕ
ಬಿಕ್ಕಟ್ಟು
ಮಾಯ:
ಇನ್ಫಿ
ಸಿಇಒ
ಆರ್ಥಿಕ
ಬಿಕ್ಕಟ್ಟು,
ಎಚ್
ಪಿಯಲ್ಲಿ
ಸಂಬಳ
ಕಡಿತ