ಇನ್ನೆರಡು ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟು ಮಾಯ
ಭಾರತೀಯ ಕೈಗಾರಿಕೆಗಳ ಒಕ್ಕೂಟ ನಗರದ ರಿಗಾಲಿಸ್ ಹೋಟೆಲ್ ನಲ್ಲಿ ಏರ್ಪಡಿಸಿದ್ದ 'ಬಿಗ್ ವಿಷನ್, ಬಿಗ್ ಆಪಾರ್ಚುನಿಟಿ, ಡೆಸ್ಟಿನೇಷನ್ ಆಫ್ ಮೈಸೂರು' ಎಂಬ ಸಮಿನಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಶ್ಚಮಾತ್ಯ ದೇಶಗಳು ಅನುಭವಿಸುತ್ತಿರುವ ಅರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಭಾರತ ಎದುರಿಸುತ್ತಿಲ್ಲ ಎಂದರು. ಭಾರತದ ಮೇಲೆ ಇದರ ಪರಿಣಾಮ ಕಡಿಮೆ ಎಂದ ಅವರು, ಭಾರತದ ರಫ್ತು ಉದ್ಯಮ ನಿರಾಂತಕವಾಗಿ ನಡೆದಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ರಫ್ತು ಉದ್ಯಮ ಲಾಭದಾಯಕವಾಗಿ ಮುನ್ನೆಡೆದಿದೆ. ಈ ಹಿನ್ನೆಲೆಯಲ್ಲಿ ಉದ್ಯಮಿಗಳು ಯಾವ ಕಾರಣಕ್ಕೂ ಭಯಬೀಳದೆ ಧೈರ್ಯದಿಂದ ವ್ಯಾಪಾರ ವಹಿವಾಟಿನ ಕಡೆಗೆ ಗಮನ ಹರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಮೈಸೂರು ಐತಿಹಾಸಿಕ ನಗರ. ಐತಿಹಾಸಿಕ ಸ್ಮಾರಕಗಳ ರಕ್ಷಣೆ ಹಾಗೂ ಪರಿಸರ ಕಾಪಾಡಲು ಸರ್ಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದ ಅವರು, ಸರ್ಕಾರದೊಂದಿಗೆ ಪ್ರಜ್ಞಾವಂತ ನಾಗರಿಕರು ಕೈಜೋಡಿಸಿದರೆ ಉತ್ತಮ ನಗರ ನಿರ್ಮಾಣ ಮಾಡಲು ಸಾಧ್ಯ ಎಂದು ಕ್ರಿಸ್ ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ನಗರದ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಅದ್ಯತೆ ನೀಡಬೇಕು, ವಾಹನ ದಟ್ಟಣೆ, ಟ್ರಾಫಿಕ್ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕು, ಸರ್ಕಾರಿಯೇತರ ಸಂಘ, ಸಂಸ್ಥೆಗಳು ಇಂತಹ ಸಾಮಾಜಿಕ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಿಎಫ್ ಟಿಆರ್ ಐ ನಿರ್ದೇಶಕ ವಿ ಪ್ರಕಾಶ್, ರಾಮನ್ ಫೈಬರ್ ಸೈನ್ಸ್ ವ್ಯವಸ್ಥಾಪಕ ನಿರ್ದೇಶಕ ಆರೋನ್ ರಾಮನ್, ಅಟೋಮೋಟಿವ್ ಏಕ್ಸೆಲ್ ಲಿಮಿಟೆಡ್ ನ ಅಧ್ಯಕ್ಷ ಅಶೋಕ್ ರಾವ್ ಮತ್ತಿತತರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)