ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯ ಬಜೆಟ್: ಜನಪ್ರಿಯ ಘೋಷಣೆಗಳ ನಿರೀಕ್ಷೆ
ಬೆಂಗಳೂರು, ಫೆ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಶುಕ್ರವಾರ 12.30ಕ್ಕೆ ರಾಜ್ಯದ 2009-10ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕ ಬಿಕ್ಕಟ್ಟು, ಲೋಕಸಭೆ ಚುನಾವಣಾ ಸವಾಲುಗಳ ನಡುವೆ ಜನಪರ ಬಜೆಟ್ ಮಂಡಿಸುವ ಸಾಧ್ಯತೆಗಳಿವೆ.
ಯಡಿಯೂರಪ್ಪ ಮಂಡಿಸುತ್ತಿರುವ ನಾಲ್ಕನೆಯ ಬಜೆಟ್ ಇದಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರದಲ್ಲಿ ಎರಡು ಬಾರಿ, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಯಡಿಯೂರಪ್ಪ ಎರಡನೆಯ ಬಜೆಟನ್ನು ಜನರ ಮುಂದಿಡುತ್ತಿದ್ದಾರೆ. ತಮ್ಮ ಬಜೆಟನ್ನು ಎಲ್ಲರೂ ಮೆಚ್ಚಿಕೊಂಡು ಆಹಾ ಎನ್ನಬೇಕು ಅಂತಹ ಬಜೆಟ್ ಮಂಡಿಸುವುದಾಗಿ ಯಡಿಯೂರಪ್ಪ ಈಗಾಗಲೇ ತಿಳಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟಿನ ಕಾರಣ ಸುಮಾರು 4 ರಿಂದ 6 ಸಾವಿರ ಕೋಟಿ ಆದಾಯ ಕೊರತೆ ಇದೆ. ಲೋಕಸಭೆ ಚುನಾವಣೆಯಲ್ಲಿ ಶ್ರೀಸಾಮನ್ಯನನ್ನು ಮರೆಯದ ಬಜೆಟ್ ಮಂಡಿಸಬೇಕಾಗಿದೆ. ಮುಖ್ಯಮಂತ್ರಿಗಳು ಹೇಗೆ ಸಮನ್ವಯತೆ ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
ಯಡಿಯೂರಪ್ಪ ಆರ್ಥಿಕ ಬಿಕ್ಕಟ್ಟು global economic crisis ಲೋಕಸಭೆ ಚುನಾವಣೆ ವಿಧಾನಸೌಧ vidhana soudha ಕರ್ನಾಟಕ ಬಜೆಟ್ karnataka budget
Story first published: Friday, February 20, 2009, 10:12 [IST]