ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರೀಲಂಕಾ ಐಟಿ ಸಲಹೆಗಾರ ಹುದ್ದೆ ಬೇಡ: ಇನ್ಫಿ ಮೂರ್ತಿ
ಬೆಂಗಳೂರು, ಫೆ. 19 : ಇತ್ತೀಚೆಗೆ ಶ್ರೀಲಂಕಾದ ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ಅಂತಾರಾಷ್ಟ್ರೀಯ ಸಲಹೆಗಾರರಾಗಿ ನೇಮಕಗೊಂಡಿದ್ದ ಇನ್ ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಸೋಮವಾರ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ಹುದ್ದೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಶ್ರೀಲಂಕಾದ ಅಧ್ಯಕ್ಷ ಮಹೀಂದಾ ರಾಜಪಕ್ಷೆ ಅವರಿಗೆ ನಾರಾಯಣಮೂರ್ತಿ ಪತ್ರವನ್ನು ಕಳುಹಿಸಿದ್ದಾರೆ.
ಜತೆಗೆ, ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲಿ ತಮಗೆ ಗೌರವ ನೀಡಿರುವುದು ಹಾಗೂ ಅಂತಾರಾಷ್ಟ್ರೀಯ ಸಲಹೆಗಾರರನ್ನಾಗಿ ತಮ್ಮನ್ನು ನೇಮಿಸಿದ ಕುರಿತು ಅವರು ಅಧ್ಯಕ್ಷರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಶ್ರೀಲಂಕಾ ವಿದೇಶಾಂಗ ಕಾರ್ಯದರ್ಶಿ ಪಲೀತ ಕೊಹನಾ ಅವರು ಶನಿವಾರ ಕೊಲಂಬೊದಲ್ಲಿ ಎನ್ ಆರ್ ನಾರಾಯಣಮೂರ್ತಿ ಅವರನ್ನು ಅಂತಾರಾಷ್ಟ್ರೀಯ ಸಲಹೆಗಾರರನ್ನಾಗಿ ನೇಮಕ ಮಾಡಿದ್ದರ ಕುರಿತು ಘೋಷಣೆ ಮಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಮಾಹಿತಿ: ರಾಜಪಕ್ಸೆ ಐಟಿ ಸಲಹೆಗಾರರಾಗಿ ಮೂರ್ತಿ
ಇನ್ಫೋಸಿಸ್ ಶ್ರೀಲಂಕಾ infosys technologies sri lanka ಕೊಲಂಬೊ ಮಾಹಿತಿ ತಂತ್ರಜ್ಞಾನ ಎನ್ಆರ್ ನಾರಾಯಣ ಮೂರ್ತಿ nr narayana murthy mahinda rajapaksa
Story first published: Thursday, February 19, 2009, 13:20 [IST]