ಚುನಾವಣಾ ಆಯುಕ್ತರಾಗಿ ಸುಧಾಕರ್ ರಾವ್?
ಬೆಂಗಳೂರು, ಫೆ. 18: ರಾಜ್ಯದ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರನ್ನು ಈಗಿನ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರ ಸ್ಥಾನದಲ್ಲಿ ಕೂರಿಸುವ ಸಾಧ್ಯತೆಗಳಿವೆ. ಚಾವ್ಲಾ ಅವರು ಮುಂದಿನ ಮುಖ್ಯ ಚುನಾವಣಾಧಿಕಾರಿಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಏಪ್ರಿಲ್ ವೇಳೆಗೆ ಎನ್ ಗೋಪಾಲಸ್ವಾಮಿ ಅವರಿಂದ ತೆರವಾಗುವ ಸ್ಥಾನವನ್ನು ನವೀನ್ ಚಾವ್ಲಾ ಅಲಂಕರಿಸಲಿದ್ದಾರೆ.
ಕರ್ನಾಟಕದ ಮೂಲದವರಾದರೂ ಸುಧಾಕರ್ ರಾವ್ ಅವರು ದೆಹಲಿ ನಿವಾಸಿ. 1973 ರ ಐಎಎಸ್ ತಂಡಕ್ಕೆ ಸೇರಿರುವ ಸುಧಾಕರ್ ರಾವ್ ಅವರ ಅಧಿಕಾರ ಅವಧಿ(ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ) ಸೆಪ್ಟೆಂಬರ್ ಗೆ ಕೊನೆಗೊಳ್ಳಲಿದೆ. ಆದರೆ, ಚುನಾವಣಾ ಆಯುಕ್ತರಾಗಿ ನೇಮಕಗೊಂಡರೆ ಮುಂದಿನ ಆರು ವರ್ಷ ಅಥವಾ 65 ವಯೋಮಿತಿ ಆಗುವವರೆಗೂ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಧಾಕರ್ ರಾವ್ ಅವರ ಪತ್ನಿ ನಿರುಪಮಾ ರಾವ್ ಚೀನಾ ದೇಶದಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿವಾದಿತ
ಆಯುಕ್ತ
ನವೀನ್
ಚಾವ್ಲಾ
ಅವರನ್ನು
ಎನ್
ಗೋಪಾಲಸ್ವಾಮಿ
ಅವರ
ಸ್ಥಾನದಲ್ಲಿ
ಕುಳ್ಳರಿಸುವುದಾಗಿ
ಯುಪಿಎ
ಈಗಾಗಲೇ
ಘೋಷಣೆ
ಮಾಡಿದೆ.
ಇದಲ್ಲದೆ,
ದಕ್ಷಿಣದಿಂದ
ಸುಧಾಕರ್
ರಾವ್
ಅವರನ್ನು
ಹೊರತು
ಪಡೆಸಿ
ಇನ್ನಿಬ್ಬರು
ಐಎಎಸ್
ಅಧಿಕಾರಿಗಳು
ಚುನಾವಣಾ
ಆಯೋಗಕ್ಕೆ
ಸೇರ್ಪಡೆಯಾಗುವ
ಸಾಧ್ಯತೆಯಿದೆ.
ನವೀನ್
ಚಾವ್ಲಾ
ಹಾಗೂ
ಡಾ.
ಎಸ್
ವೈ
ಖುರೇಷಿ
ಉತ್ತರ
ಮೂಲದವರಾಗಿದ್ದಾರೆ.
(ಏಜೆನ್ಸೀಸ್)
ಪೂರಕ
ಓದಿಗೆ:
ಚುನಾವಣೆ
ಆಯೋಗದಲ್ಲಿ
ಭುಗಿಲೆದ್ದ
ಭಿನ್ನಮತ
ಚುನಾವಣಾಪೂರ್ವ
ಸಮೀಕ್ಷೆ
ನಡೆಸಬೇಡಿ:
ಆಯೋಗ