ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರಿನಲ್ಲಿ ಪೇದೆಯಿಂದ ಇನ್ಸ್ ಪೆಕ್ಟರ್ ಹತ್ಯೆ
ಮೈಸೂರು, ಫೆ. 16 : ಕೆಎಸ್ ಆರ್ ಪಿ ಇನ್ಸ್ ಪೆಕ್ಟರ್ ರೊಬ್ಬರನ್ನು ಅದೇ ಇಲಾಖೆಯ ಪೇದೆಯೊಬ್ಬ ಗುಂಡಿಕ್ಕಿ ಕೊಲೆಗೈದು ಕೊನೆಗೂ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ಕೆಎಸ್ಆರ್ ಪಿ ಕ್ವಾರ್ಟರ್ಸ್ ನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಕೆಎಸ್ಆರ್ ಪಿ ಇನ್ಸ್ ಪೆಕ್ಟರ್ ನಾಗೇಗೌಡ ಕೊಲೆಗೀಡಾದವರು, ಅದೇ ಇಲಾಖೆಯ ಶಿವಕುಮಾರ್ ಎಂಬ ಪೇದೆ ಗುಂಡಿಕ್ಕಿ ಕೊಲೆ ಮಾಡಿ ಕೊನೆಗೆ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಾತ ಎಂದು ಪೋಲೀಸರು ತಿಳಿಸಿದ್ದಾರೆ. ಘಟನೆಗೆ ಹಳೆ ವೈಷಮ್ಯ ಕಾರಣ ಎನ್ನಲಾಗಿದೆ. ಇನ್ಸ್ ಪೆಕ್ಟರ್ ನಾಗೇಗೌಡ ಪೇದೆಗೆ ಶಿವಕುಮಾರ್ ಅವರಿಗೆ ತೀವ್ರ ಕಿರುಕುಳ ನೀಡಿರುವುದು ಈ ಘಟನೆಗೆ ಕಾರಣ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
(ದಟ್ಸ್
ಕನ್ನಡ
ವಾರ್ತೆ)
ಐಐಎಎಸ್ಸಿ
ನಿವೃತ್ತ
ಪ್ರಾಧ್ಯಾಪಕ
ಸೇರಿ
ಮೂವರ
ಕೊಲೆ
Comments
Story first published: Monday, February 16, 2009, 18:06 [IST]