ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ 14, ಮದುವೆ ಮಾಡಿಸೋಲ್ಲ, ಮುತಾಲಿಕ್

By Staff
|
Google Oneindia Kannada News

ಬೆಳಗಾವಿ, ಫೆ. 11 : ಪ್ರೇಮಿಗಳಿಂದ ತೀವ್ರ ವಿರೋಧ ಹಾಗೂ ಸರ್ಕಾರದಿಂದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಬಂದ ಹಿನ್ನೆಲೆಯಲ್ಲಿ ಫೆ 14 ರಂದು ಪ್ರೇಮಿಗಳಿಗೆ ತಾಳಿ ಕಟ್ಟಿ, ಇಲ್ಲ ರಾಖಿ ಕಟ್ಟಿ ಅಭಿಯಾನದಲ್ಲಿ ಶ್ರೀರಾಮಸೇನೆ ಸ್ವಲ್ಪ ಸಡಿಲಿಕೆ ನೀಡಿದೆ. ತಂದೆ ತಾಯಿಗಳ ಒಪ್ಪಿಗೆ ಪಡೆದು ಮದುವೆ ಮಾಡಿಸುವುದಾಗಿ ಅದು ಹೇಳಿದೆ.

ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.ನಮ್ಮ ಸಂಘಟನೆ ಪ್ರೇಮಿಗಳ ದಿನವನ್ನು ವಿರೋಧಿಸುತ್ತದೆ. ಅದರಲ್ಲಿ ಎರಡು ಮಾತಿಲ್ಲ. ನಾವು ಕಳೆದ ಫೆ 4 ರಂದು ಹೇಳಿದ ಪ್ರಕಾರ, ಫೆ 14 ರಂದು ಪ್ರೇಮಿಗಳಿಗೆ ಎಚ್ಚರಿಕೆ ನೀಡಿದ್ದೇವು. ತಾಳಿ ಕಟ್ಟಿ ಇಲ್ಲವೇ ರಾಖಿ ಕಟ್ಟಿ ಎಂದು, ಆದರೆ ಈ ಹೇಳಿಕೆಯನ್ನು ಸ್ವಲ್ಪ ಬದಲಾಯಿಸಲಾಗಿದೆ. ಪ್ರೇಮಿಗಳ ದಿನದಂದು ಯುವಕ-ಯುವತಿಯರ ತಂದೆ-ತಾಯಿಗಳ ಒಪ್ಪಿಗೆ ಪಡೆದು ಮದುವೆ ಮಾಡಿಸುವುದಾಗಿ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ.

ಮುಂದುವರಿದ ಕೆಲ ಹೆಣ್ಣುಮಕ್ಕಳು ತಮ್ಮ ವಿರುದ್ಧ ಚಡ್ಡಿ ಅಭಿಯಾನ ಆರಂಭಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುತಾಲಿಕ್, ಇದು ಸಂಸ್ಕೃತಿಯಲ್ಲ, ವಿಕೃತಿ ಎಂದು ಹರಿಹಾಯ್ದರು. ನಮ್ಮ ವಿರುದ್ಧ ಕೆಂಪು ಚಡ್ಡಿ ಅಭಿಯಾನ ಆರಂಭಿಸಿರುವವರಿಗೆ ಪ್ರತಿಯಾಗಿ ಶ್ರೀರಾಮಸೇನೆಯ ಮಹಿಳಾ ಘಟಕ ಸೀರೆ ಅಭಿಯಾನವನ್ನು ಹಮ್ಮಿಕೊಂಡಿದೆ. ಕೆಂಪು ಚಡ್ಡಿ ಕಳಿಸುವವರಿಗೆ ಸೀರೆಯನ್ನು ಕಳಿಸಲಾಗುವುದು ಎಂದು ಮುತಾಲಿಕ್ ಸ್ಪಷ್ಟಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)
ಪ್ರೇಮಿಗಳ ದಿನದಂದು ಮುತಾಲಿಕ್‌ಗೆ ಪಿಂಕ್ ಚಡ್ಡಿ!
ಪ್ರೇಮಿಗಳಿಗೆ ಅಗ್ನಿ ಶ್ರೀಧರ ಅವರ ಹೆಲ್ಪ್ ಲೈನ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X