ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ರೆಡ್ಡಿ ಮನವಿ

By Staff
|
Google Oneindia Kannada News

ಹೈದರಾಬಾದ್, ಫೆ. 10 : ಕೊನೆಗೂ ಭಾರಿ ಟೀಕೆ ಟಿಪ್ಪಣಿಗಳ ನಂತರ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಸತ್ಯಂ ಗೋಲ್ ಮಾಲ್ ಪ್ರಕರಣವನ್ನು ಸಿಬಿಐ ತನಿಖೆ ವಹಿಸುವಂತೆ ಕುರಿತು ಸವಿಸ್ತಾರವಾದ ಪತ್ರವೊಂದನ್ನು ಕೇಂದ್ರ ಸರ್ಕಾರಕ್ಕೆ ಬರೆದಿದ್ದಾರೆ. ಈ ಮೂಲಕ ಪ್ರತಿಪಕ್ಷ ಸೇರಿ ಜನಸಾಮಾನ್ಯರ ಒತ್ತಡಕ್ಕೆ ಸರ್ಕಾರ ಮಣಿದಂತಾಗಿದೆ.

ಕಳೆದ ತಿಂಗಳು ಜನವರಿ 7 ರಂದು ಸತ್ಯಂ ಕಂಪ್ಯೂಟರ್ಸ್ ಮಾಜಿ ಚೇರಮನ್ ರಾಮಲಿಂಗರಾಜು ಕಂಪನಿಯ ಸುಮಾರು 7,800 ಕೋಟಿ ರುಪಾಯಿಗಳ ಅವ್ಯವಹಾರ ಮಾಡಿರುವ ಪತ್ರವನ್ನು ಕಂಪನಿಯ ಆಡಳಿತ ಮಂಡಳಿಗೆ ಬರೆಯುವ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು, ಈ ಹಗರಣ ದೇಶದ ಮಾರುಕಟ್ಟೆ ಮುಖ್ಯವಾಗಿ ಸಾಫ್ಟವೇರ್ ಉದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿತ್ತು.

ಸತ್ಯಂ ಪರವಾಗಿರುವ ಮುಖ್ಯಮಂತ್ರಿಯವರು ಸಿಬಿಐ ತನಿಖೆಗೆ ವಹಿಸಲು ನಿರಾಸಕ್ತಿ ತಾಳಿದ್ದಾರೆ. ಸಿಎಂ ಕೂಡ ರಾಮಲಿಂಗರಾಜು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ ಹೀಗೆ ಅನೇಕ ಆರೋಪಗಳು ರಾಜಶೇಖರರೆಡ್ಡಿ ಅವರ ವಿರುದ್ಧ ಪ್ರತಿಪಕ್ಷಗಳು ಮಾಡಿದ್ದವು. ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆ ನಡೆಸಿತ್ತು.

(ದಟ್ಸ್ ಕನ್ನಡ ವಾರ್ತೆ)
ಸತ್ಯಂ ಪ್ರಕರಣ, ಸೆಬಿಯಿಂದ ರಾಜು ವಿಚಾರಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X