ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿತ್ರ ಕಲ್ಯಾಣ್ ಗೆ ಉಲ್ಟಾ ಹೊಡೆದ ಮುಲಾಯಂ

By Staff
|
Google Oneindia Kannada News

ಲಕ್ನೊ,ಫೆ.3: ಇತ್ತೀಚೆಗಷ್ಟೇ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಆರಂಭದಲ್ಲೇ ಮುಜುಗರ ಎದುರಿಸಬೇಕಾಗಿ ಬಂದಿದೆ. ನಾನು ಮತ್ತು ಕಲ್ಯಾಣ್ ಒಳ್ಳೆ ಸ್ನೇಹಿತರು ಅವರ ಜೊತೆ ಯಾವುದೇ ಮೈತ್ರಿ ಇಲ್ಲ. ಬಾಬ್ರಿ ಮಸೀದಿ ಧ್ವಂಸಕ್ಕೆ ಅಂದಿನ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರೇ ನೇರ ಹೊಣೆ ಎಂದು ಮುಲಾಯಮ್ ಸಿಂಗ್ ಹೇಳಿದ್ದಾರೆ.

ಬಾಬ್ರಿ ಮಸೀದಿ ಧ್ವಂಸಕ್ಕೆ ಕಲ್ಯಾಣ್ ಸಿಂಗ್ ಜವಾಬ್ದಾರರಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ಗೆಳೆತನ ಬೇರೆ ರಾಜಕೀಯ ಬೇರೆ, ಬಾಬ್ರಿ ಮಸೀದಿ ವಿವಾದದಲ್ಲಿ ಇಡೀ ದೇಶ ತಲೆ ತಗ್ಗಿಸುವಂತಾಗಿದೆ ಇದಕ್ಕೆ ಅಂದಿನ ಬಿಜೆಪಿ ಸರಕಾರವೇ ಕಾರಣ ಎಂದು ಹೇಳಿದರು.

ಕಲ್ಯಾಣ್ ಸಿಂಗ್ ಮತ್ತು ಅವರ ಪುತ್ರ ರಾಜಬೀರ್ ಸಿಂಗ್ ಸಮಾಜವಾದಿ ಪಕ್ಷ ಸೇರಿದ ಸಂದರ್ಭದಲ್ಲಿ, ಕಲ್ಯಾಣ್ ಸಿಂಗ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ, ಬಾಬ್ರಿ ಮಸೀದಿ ಧ್ವಂಸಕ್ಕೆಕಲ್ಯಾಣ್ ಜವಾಬ್ದಾರರಲ್ಲ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X