ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2003ರ ಕೇಸಿನಲ್ಲಿ ಮುತಾಲಿಕ್ ಗೆ ಜಾಮೀನು

By Staff
|
Google Oneindia Kannada News

ವಿರಾಜಪೇಟೆ, ಫೆ. 2: 2003 ರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ಗೆ ವಿರಾಜಪೇಟೆ ಪ್ರಮುಖ ನ್ಯಾಯಾಲಯ ಇಂದು ಜಾಮೀನು ನೀಡಿ ಬಿಡುಗಡೆಗೆ ಆದೇಶಿಸಿದೆ.

ನ್ಯಾಯಾಧೀಶ ಆರ್.ಅಶೋಕ್ ಒಂದು ಲಕ್ಷ ವೈಯಕ್ತಿಕ ಬಾಂಡ್ ಆಧಾರದ ಮೇಲೆ ಅವರಿಗೆ ಜಾಮೀನು ನೀಡಿದರು. ಮುತಾಲಿಕ್ ಪರ ವಕೀಲ ನಾಣಯ್ಯ ವಾದಿಸಿದರು. ಕಳೆದ ಒಂದು ವಾರದಲ್ಲಿ ಮುತಾಲಿಕ್ ಪಡೆಯುತ್ತಿರುವ ಮೂರನೇ ಜಾಮೀನು ಇದಾಗಿದೆ. ಡಿಸೆಂಬರ್ 2003 ರಲ್ಲಿ ಗೋಣಿಕೊಪ್ಪಲಿನಲ್ಲಿ " ಹಿಂದೂ ಸಮಾಜೋತ್ಸವಒಂದರಲ್ಲಿ ಮುತಾಲಿಕ್ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಕೊಡಗು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)
ಪ್ರೇಮಿಗಳ ದಿನಾಚರಣೆಗೆ ಶ್ರೀರಾಮಸೇನೆ ವಿರೋಧ
ಎಟಿಎಸ್ ಪೊಲೀಸರಿಂದ ಮುತಾಲಿಕ್ ವಿಚಾರಣೆ
ಗಡ್ಡಧಾರಿ ಮಹಿಳೆಯರಿಂದ ಸಂಸ್ಕೃತಿ ನಾಶ ಇಲ್ಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X