ಫೆಬ್ರವರಿ ಅಂತ್ಯಕ್ಕೆ ರಾಜ್ಯ ಬಜೆಟ್ : ಯಡಿಯೂರಪ್ಪ
ಬೆಂಗಳೂರು, ಜ. 30: 2009-2010 ನೇ ಸಾಲಿನ ರಾಜ್ಯ ಬಜೆಟ್ ಅನ್ನು ಫೆಬ್ರವರಿ ತಿಂಗಳ ಅಂತ್ಯದೊಳಗೆ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.
ಬಜೆಟ್ ಮಂಡನೆಯ ಬಗ್ಗೆ ಸಭಾಪತಿ ಜಗದೀಶ್ ಶೆಟ್ಟರ್ ಅವರ ಜೊತೆ ಚರ್ಚಿಸಿ, ಆಯವ್ಯಯ ಮಂಡನೆಯ ದಿನಾಂಕವನ್ನು ಅಂತಿಮವಾಗಿ ನಿರ್ಧರಿಸಲಾಗುವುದು. ಜಾಗತಿಕ ಅರ್ಥಿಕ ಬಿಕ್ಕಟ್ಟಿನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕೊಂಚ ಹದಗೆಟ್ಟಿದ್ದರೂ, ವಾರ್ಷಿಕ ಯೋಜನೆಗಳ ಮೊತ್ತವನ್ನು ಕಡಿಮೆ ಮಾಡುವುದಿಲ್ಲ. ಈ ಮುಂಚೆ ನಿಗದಿಯಾದ ಯೋಜನೆಗಳಿಗೆ ಮಂಜೂರಾದ ಹಣವನ್ನು ಕೂಡ ಕಡಿಮೆ ಮಾಡುವುದಿಲ್ಲ ಎಂದು ಸಿಎಂ ಭರವಸೆ ನೀಡಿದರು.
ಏಪ್ರಿಲ್
-ಮೇ
ವೇಳೆಗೆ
ಲೋಕಸಭಾ
ಚುನಾವಣೆ
ನಡೆಯವುದರಿಂದ
ಶೀಘ್ರದಲ್ಲೇ
ಬಜೆಟ್
ಮಂಡನೆ
ಮಾಡುವ
ಸಾಧ್ಯತೆಗಳಿವೆ.
ಕಳೆದ
ಅರ್ಥಿಕ
ವರ್ಷದಲ್ಲಿ
ರಾಜ್ಯದ
ಬಜೆಟ್
ಯೋಜನಾ
ಮೊತ್ತ
ಸುಮಾರು
25,953
ಕೋಟಿರು.ಗಳಾಗಿತ್ತು.
ಈ
ಬಾರಿ
ಕೂಡ
ಜನಸಾಮಾನ್ಯರೆಗೆ
ಹೆಚ್ಚಿನ
ಹೊರೆಯಾಗದಂತೆ
ಬಜೆಟ್
ರೂಪಿಸಲಾಗುವುದು
ಎಂದು
ಮುಖ್ಯಮಂತ್ರಿಗಳ
ಕಚೇರಿ
ಮೂಲಗಳಿಂದ
ತಿಳಿದು
ಬಂದಿದೆ.
(ದಟ್ಸ್
ಕನ್ನಡ
ವಾರ್ತೆ)
ಶಿವಮೊಗ್ಗದ
505
ಕೆರೆಗಳಿಗೆ
ಬಂತು
ಸುಯೋಗ
15
ಅಭಿವೃದ್ಧಿ
ಯೋಜನೆಗಳಿಗೆ
ಸರ್ಕಾರದ
ಅಸ್ತು