ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾಣಿಕ್ ಷಾ ಮೈದಾನದ ಪ್ರವೇಶ ಮಾಹಿತಿ
ಬೆಂಗಳೂರು, ಜ. 25 : ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಂದು ಮಾಣಿಕ್ ಷಾ ಕವಾಯತು ಮೈದಾನದ ಪ್ರವೇಶ ಮಾಹಿತಿ ಕೆಳಕಂಡಂತಿದೆ.
ವಿ.ವಿ.ಐ.ಪಿ. ಆಹ್ವಾನ ಪತ್ರಿಕೆ ಹೊಂದಿರುವವರು ಕಬ್ಬನ್ ಪಾರ್ಕ್, ರಾಜಭವನ ರಸ್ತೆಯಿಂದ ಜಿ-1 ಗೇಟ್ ಮೂಲಕ, ವಿಐಪಿ ಆಹ್ವಾನ ಪತ್ರಿಕೆ ಹೊಂದಿರುವ ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ ಮತ್ತು ಮಾಧ್ಯಮದವರು ಜಿ - 2 ಗೇಟ್ ಮೂಲಕ, ಮಾಜಿ ರಕ್ಷಣಾ ಸಿಬ್ಬಂದಿ, ಬಿ.ಎಸ್.ಎಫ್ ಸಿಬ್ಬಂದಿ ಮತ್ತು ಎಲ್ಲಾ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ ಕಾಮರಾಜ ರಸ್ತೆಯಿಂದ ಜಿ - 3 ಗೇಟ್ ಮೂಲಕ ಹಾಗೂ ಸಾರ್ವಜನಿಕರು ಜಿ - 4 ಗೇಟ್ ಮೂಲಕ ಪ್ರವೇಶಿಸಬೇಕೆಂದು ಕೋರಿದೆ.
ನಾಲ್ಕು ಚಕ್ರದ ವಾಹನದಲ್ಲಿ ಬರುವ ಎಲ್ಲರೂ ಕಾರ್ ಪಾಸ್ಗಳನ್ನು ವಾಹನಗಳ ಮುಂಭಾಗದ ಗಾಜಿನ ಮುಂದೆ ಅಂಟಿಸಿರಬೇಕು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಲು ಕೋರಿದೆ.
(ದಟ್ಸ್
ಕನ್ನಡ
ವಾರ್ತೆ)
ಗಣರಾಜ್ಯೋತ್ಸವ
:ವಿಪತ್ತು
ನಿರ್ವಹಣೆ
ಘಟಕ
Comments
Story first published: Sunday, January 25, 2009, 14:40 [IST]