ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ಆಪರೇಶನ್ ಕಮಲ ಮುಂದುವರಿಕೆ

By Staff
|
Google Oneindia Kannada News

ಬೆಳಗಾವಿ, ಜ. 25 : ಆಪರೇಶನ್ ಕಮಲವನ್ನು ಸ್ಥಳೀಯ ಸಂಸ್ಥೆಗಳಿಗೂ ಮುಂದುವರಿಸಿರುವ ಬಿಜೆಪಿ, ಅರಕಲಗೂಡು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಹಾಲಿ ಉಪಾಧ್ಯಕ್ಷ ಸೇರಿದಂತೆ 10 ಮಂದಿ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರನ್ನು ಸೆಳೆದುಕೊಂಡಿದೆ. ಜೆಡಿಎಸ್ ನ ಆರು ಮಂದಿ, ಹಾಗೂ ಕಾಂಗ್ರೆಸ್ ನಾಲ್ವರು ತಾಲ್ಲೂಕು ಪಂಚಾಯಿತಿ ಸದಸ್ಯರು ವಿಧಾನ ಮಂಡಲದ ಮುಕ್ತಾಯದ ದಿನದಂದು ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ತವರು ಜಿಲ್ಲೆ ಹಾಸನದಲ್ಲಿ ಪಕ್ಷದ ನೆಲೆಯನ್ನು ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ತಾಲ್ಲೂಕು ಮಟ್ಟದಲ್ಲಿ ತನ್ನ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಜೆಡಿಎಸ್ ನ ಅರಕಲಗೂಡು ತಾಪಂ ಮಾಜಿ ಅಧ್ಯಕ್ಷ ಬಿ ಆರ್ ಮಧುಕರ್, ಹಾಲಿ ಉಪಾಧ್ಯಕ್ಷ ಎಚ್ ಮಾದೇಶ್, ಸದಸ್ಯರಾದ ಬಿ ಎಸ್ ಲಕ್ಷ್ಮಿ, ಜೆ ಬಿ ಸಂಜೀವಗೌಡ, ಎಂ ಡಿ ಹುಲುಕೊಂಡಯ್ಯ, ಎಂ ಬಿ ಪಾರ್ವತಿ ಹಾಗೂ ಕಾಂಗ್ರೆಸ್ ನ ಸದಸ್ಯರಾದ ಗಾಯತ್ರಿ, ಗೌರಮ್ಮ, ಮಹದೇವಮ್ಮ ಮತ್ತು ಎಂ ಡಿ ಮೋಹನ್ ಅವರು ಬಿಜೆಪಿ ಸೇರಿದರು. ಸಚಿವ ಜನಾರ್ದನರೆಡ್ಡಿ, ಶ್ರೀರಾಮುಲು, ಬಿಜೆಪಿ ವಕ್ತಾರ ಶಾಸಕ ಸಿಟಿ ರವಿ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ, ಯಡ್ಡಿ ಪುತ್ರ ಸ್ಪರ್ಧೆ ?
ಉತ್ತರ ಕರ್ನಾಟಕಕ್ಕೆ ಭರಪೂರ ಯೋಜನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X