ಕೊಪ್ಪಳದ ಆನೆಗೊಂದಿ ಬಳಿಕುಸಿದು ಬಿದ್ದಸೇತುವೆ
ಕಳೆದ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆನೆಗೊಂದಿ ತೂಗುಸೇತುವೆ ನಿರ್ಮಾಣ ಕಾರ್ಯ ಇತ್ತೀಚೆಗೆ ಆರಂಭಗೊಂಡಿತ್ತು. ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಈ ಸೇತುವೆ ನಿರ್ಮಿಸಿದರೆ, ಐತಿಹಾಸಿಕ ಪರಂಪರೆ ಪಟ್ಟಿಯಿಂದ ಹಂಪೆ ಹಾಗೂ ಆನೆಗೊಂದಿಯ ಹೆಸರಗಳನ್ನು ತೆಗೆಯಲಾಗುವುದು ಎಂದು ಯುನೆಸ್ಕೋ ಎಚ್ಚರಿಕೆ ನೀಡಿತ್ತು. ಇದರಿಂದ ಈ ಯೋಜನೆಯನ್ನು ದಶಕಗಳಿಂದ ರಾಜ್ಯ ಸರ್ಕಾರ ಕೈಬಿಟ್ಟಿತ್ತು.
ಇತ್ತೀಚೆಗೆ ಆರೋಗ್ಯ ಸಚಿವ ಶ್ರೀರಾಮುಲು ಅವರ ಪ್ರಯತ್ನದ ಫಲವಾಗಿ ತೂಗುಸೇತುವೆ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗಿತ್ತು. ಹಳೆಯದಾದ ಈ ಸೇತುವೆ ಕಾಮಗಾರಿಯನ್ನು ನಿಲ್ಲಿಸಿ ಅನೇಕ ದಿನಗಳೆ ಕಳೆದುಹೋಗಿದ್ದವು. ಹಳೆಯ ಕಟ್ಟಡವಾಗಿದ್ದರಿಂದ ಕಬ್ಬಿಣದ ಸಾಮರ್ಥ್ಯ ಕಡಿಮೆಯಾಗಿರುವ ವರದಿಯನ್ನು ಇಂಜಿನಿಯರ್ ಗಳು ನೀಡಿದ್ದರೂ ಕೂಡಾ ಅದೇ ಸೇತುವೆ ಮೇಲೆಯೇ ಮತ್ತೆ ಕಾಮಗಾರಿ ಆರಂಭಿಸಿರುವುದು ಈ ದುರ್ಘಟನೆ ಕಾರಣ ಎನ್ನಲಾಗಿದೆ.
ಐತಿಹಾಸಿಕ ಪ್ರದೇಶವಾಗಿರುವ ಆನೆಗೊಂದಿಯ ತೂಗುಸೇತುವೆ ಪೂರ್ಣಗೊಳಿಸಿದರೆ ಹಂಪೆಗೆ ತೆರಳಲು ಸರಳವಾಗುತ್ತಿತ್ತು. ಈ ಪ್ರದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿದೇಶ ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಇದು ರಾಜ್ಯದ ಪ್ರವಾಸಿ ತಾಣವೂ ಹೌದು.
(ದಟ್ಸ್ ಕನ್ನಡ ವಾರ್ತೆ)