ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ಕರೆ ಮತ್ತು ಒಂಬ್ಲೆ ಗೆ ಅಶೋಕಚಕ್ರ
ನವದೆಹಲಿ, ಜ. 21 : ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣವನ್ನಪ್ಪಿದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಮತ್ತು ಎಎಸ್ಐ ತುಕಾರಾಂ ಒಂಬ್ಲೆ ಸೇರಿ ಇಬ್ಬರಿಗೆ ಮಾತ್ರ ಪ್ರತಿಷ್ಠಿತ ಅಶೋಕಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಮುಂಬೈ ಉಗ್ರರ ಕೃತ್ಯದಲ್ಲಿ ಜೀವದ ಹಂಗು ತೊರೆದು ಹೋರಾಟ ನಡೆಸಿದ್ದ 16 ಮಂದಿ ಪೊಲೀಸರಿಗೆ ಈ ಪ್ರಶಸ್ತಿ ನೀಡಬೇಕೆಂದು ಮಹಾರಾಷ್ಟ್ರ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಅಶೋಕಚಕ್ರ ಪ್ರಶಸ್ತಿಯನ್ನು ಇಬ್ಬರಿಗೆ ಮತ್ತು ಆರು ಜನರಿಗೆ ಕೀರ್ತಿಚಕ್ರ ನೀಡಲು ತೀರ್ಮಾನಿಸಿದೆ. ಕೀರ್ತಿಚಕ್ರ ಪಡೆದವರಲ್ಲಿ ಮುಂಬೈ ಭಯೋತ್ಪಾದನೆಯಲ್ಲಿ ಅಸುನೀಗಿದ ಡಿಸಿಪಿ ಅಶೋಕ್ ಕಾಮ್ಟೆ, ಎನ್ ಕೌಂಟರ್ ತಜ್ಞ ವಿಜಯ್ ಸಲಸ್ಕರ್ ಮತ್ತು ಶಶಾಂಕ್ ಶಿಂಧೆ ಸೇರಿದ್ದಾರೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಈ ಮರಣೋತ್ತರ ಪ್ರಶಸ್ತಿಯನ್ನು ಜನವರಿ 26 ಗಣರಾಜ್ಯೋತ್ಸವದ ದಿನ ಪ್ರದಾನ ಮಾಡಲಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಪಾಕ್
ಗೆ
ಕಸಬ್
ಡಿಎನ್ಎ
ಸ್ಯಾಂಪಲ್
Comments
Story first published: Wednesday, January 21, 2009, 17:13 [IST]