ಅಟಲ್ ಸ್ಪರ್ಧಿಸಿದರೆ ನಾ ಹಿಂದೆ ಸರಿವೆ: ಸಂಜು
ಲಕ್ನೋ, ಜ. 19 : ಕೊನೆಗೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಚುನಾವಣೆಯ ಅಖಾಡಕ್ಕಿಳಿಯಲು ಬಾಲಿವುಡ್ ನಟ ಸಂಜಯ ದತ್ ನಿರ್ಧರಿಸಿದ್ದಾರೆ. ಆದರೆ, ಲಕ್ನೋ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಸ್ಪರ್ಧಿಸಿದರೆ ನಾನು ಅವರ ವಿರುದ್ಧ ಸ್ಪರ್ಧಿಸುವುದಿಲ್ಲ ಎಂದು ದತ್ತ ಖಡಾಖಂಡಿತವಾಗಿ ಹೇಳಿದ್ದಾರೆ.
ಅಟಲ್ ಬಗ್ಗೆ ಅವರ ಬಗ್ಗೆ ಅಪಾರ ಗೌರವವಿದೆ. ಅಟಲ್ ನನಗೆ ತ೦ದೆಗೆ ಸಮಾನ ಹಾಗೂ ಅವರ ವಿರುದ್ಧ ಸ್ಪರ್ಧಿಸಲು ನನ್ನ ಮನಸ್ಸು ಒಪ್ಪದು. ಅವರು ಸ್ಪರ್ಧಿಸಿದರೆ ನಾನು ಕಣದಿಂದ ನಿವೃತ್ತಿಯಾಗುವೆ ಎಂದು ಥೇಟ್ ಸಿನಿಮಾ ಶೈಲಿಯ ಮಾತುಗಳನ್ನು ಸಂಜಯದತ್ ಆಡಿದ್ದಾರೆ. ಆದರೆ ಬಿಜೆಪಿ ನಾಯಕ ಶತ್ರುಘ್ನಸಿನ್ಹಾ ಅವರ ಬಳಿ ಮಾತಾಡಿ ಅಟಲ್ ಸ್ಪರ್ಧಿಸುವುದಿಲ್ಲ ಎ೦ದು ಖಚಿತಪಡಿಸಿಕೋಡ ಮೇಲೆ ಚುನಾವಣೆಯಲ್ಲಿ ನಿಲ್ಲಲು ಒಪ್ಪಿಗೆ ಸೂಚಿಸಿದ್ದೇನೆ. ನನ್ನ ತ೦ದೆ ನಿಧನದ ನ೦ತರ ಕಾ೦ಗ್ರೆಸ್ ನ ಯಾವುದೇ ನಾಯಕರು ನನ್ನ ಸಹಕಾರಕ್ಕೆ ಬ೦ದಿಲ್ಲ ಎ೦ದು ದತ್ ಆರೋಪಿಸಿದರು. ಸಂಜಯ ದತ್ ಸದೋಹರಿ ಪ್ರಿಯಾ ದತ್ತ ಕಾಂಗ್ರೆಸ್ ಪಕ್ಷದ ಹಾಲಿ ಲೋಕಸಭೆ ಸದಸ್ಯರಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)