ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಗೆ ಕಸಬ್ ಡಿಎನ್ಎ ಸ್ಯಾಂಪಲ್

By Staff
|
Google Oneindia Kannada News

ನವದೆಹಲಿ, ಜ. 19 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ- ಪಾಕ್ ಮಧ್ಯೆ ಆರೋಪ ಪ್ರತ್ಯಾರೋಪಗಳ ನಡುವೆ ಭಾರತ ಇನ್ನಷ್ಟು ಸಾಕ್ಷ್ಯಾಧಾರಗಳನ್ನು ಇಸ್ಲಾಮಾಬಾದ್ ಗೆ ಕಳುಹಿಸಲು ನಿರ್ಧರಿಸಿದೆ. ಭಾರತ ಈ ಮೊದಲು ಕಳುಹಿಸಿದ್ದ ಸಾಕ್ಷ್ಯಾಧಾರಗಳನ್ನು ಬರೀ ಮಾಹಿತಿ ಮಾತ್ರ ಎಂದು ಪಾಕ್ ಹೇಳಿತ್ತು. ಇದನ್ನು ಸಾಕ್ಷ್ಯಾಧಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿತ್ತು.

ಮುಂಬೈ ಭಯೋತ್ಪಾದನೆಯ ಉಗ್ರರಿಗೆ ಶಿಕ್ಷೆ ನೀಡಲೇಬೇಕು ಎಂದು ಪಣತೊಟ್ಟಿರುವ ಭಾರತ, ಈ ಬಾರಿ ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನ ಡಿಎನ್ ಎ ಸ್ಯಾಂಪಲ್, ಲಷ್ಕರ್ ಇ ತೊಯ್ಬಾ ಸಂಘಟನೆ ಕಾರ್ಯಕಾರಿ ಮುಖ್ಯಸ್ಥ ಝಾಕೀರ್ ಉರ್ ರೆಹೆಮಾನ್ ಲಖ್ವಿ ಹಾಗೂ ಝರಾರ್ ಶಾ ಅವರಿಗೆ ಸಂಬಂಧಿಸಿದ ಸಮಗ್ರ ಮಾಹಿತಿ. ಹಾಗೂ ಮುಂಬೈ ಆಗಮಿಸಿದ ಉಗ್ರರ ತರಬೇತಿ ನೀಡಿದ ವಿವರ ಸೇರಿದಂತೆ ಮತ್ತಿತರ ಮಹತ್ವದ ದಾಖಲೆಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿದೆ.

ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ ಕಳುಹಿಸಿರುವ ದಾಖಲೆಗಳನ್ನು ಸಾಕ್ಷ್ಯಾಧಾರಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಅದು ಕೆಲವು ಮಾಹಿತಿ ಹೊಂದಿರುವ ವಿವರವಾಗಿದೆ ಎಂದು ಪಾಕ್ ಆಂತರಿಕ ಸಚಿವ ರೆಹೆಮಾನ್ ಮಲಿಕ್ ಸ್ಪಷ್ಟಪಡಿಸಿದ್ದರು. ಈ ಮಾತನ್ನು ಪಾಕ್ ಎಲ್ಲ ನಾಯಕರು ಪುನರುಚ್ಚರಿಸಿದ್ದರು.

(ಏಜನ್ಸೀಸ್ )
ದುರಾನಿ ಬಂಧನಕ್ಕೆ ಪಾಕ್ ಐಎಸ್ಐ ಆಗ್ರಹ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X