ಮದುವಣಗಿತ್ತಿಯಂತೆ ಸಂಭ್ರಮಿಸುತ್ತಿರುವ ಬೆಳಗಾವಿ
ರಾಜ್ಯಪಾಲ ರಾಮೇಶ್ವರ ಠಾಕೂರ್ ಇಂದು ಮಧ್ಯಾಹ್ನ 12.30ಕ್ಕೆ ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದಾರೆ. ಅರ್ಧ ಗಂಟೆಯ ಭಾಷಣದ ನಂತರ ಜೆಡಿಎಸ್ ಶಾಸಕರಾಗಿದ್ದ ಸಿದ್ದರಾಜು, ಮಾಜಿ ಪ್ರಧಾನಮಂತ್ರಿ ವಿಪಿ ಸಿಂಗ್ ಹಾಗೂ ಮಾಜಿ ಸಚಿವ ಹಾಗೂ ನೀರಾವರಿ ತಜ್ಞ ಎಚ್ಎನ್ ನಂಜೇಗೌಡ ಅವರ ನಿಧನಕ್ಕೆ ಸಂತಾಪ ಸೂಚಕ ಸಭೆ ನಡೆಸಿ ಕಲಾಪವನ್ನು ನಾಳೆಗೆ ಮುಂದೂಡುವ ಸಾಧ್ಯತೆಗಳಿವೆ.
ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡದಿರುವ ಸರ್ಕಾರದ ಕ್ರಮವನ್ನು ತೀವ್ರ ಖಂಡಿಸಿ ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿಯುವ ಸಾಧ್ಯತೆಗಳಿವೆ. ಆದರೆ, ಶೂನ್ಯ ವೇಳೆಯಲ್ಲಿ ಚರ್ಚೆ ಅವಕಾಶ ಕಲ್ಪಿಸಿಕೊಡಲಾಗುವುದು. ಪ್ರಶ್ನೋತ್ತರಕ್ಕೆ ಯಾವುದೇ ಚ್ಯುತಿ ಬರದ ಹಾಗೆ ಅಧಿವೇಶನ ಯಶಸ್ವಿಯಾಗಿ ನಡೆಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಬೆಳಗಾವಿ ಅಧಿವೇಶನಕ್ಕೆ ಭಾರಿ ಭದ್ರತೆಯನ್ನು ಕಲ್ಪಿಸಲಾಗಿದ್ದು, ಸುಮಾರು 5 ಸಾವಿರ ಪೊಲೀಸರನ್ನು ಪಹರೆಗೆ ನಿಯೋಜಿಸಲಾಗಿದೆ.
(ದಟ್ಸ್
ಕನ್ನಡ
ವಾರ್ತೆ)
ಉತ್ತರಕರ್ನಾಟಕದಲ್ಲಿ
ಇನ್ನೊಂದು
ಅಧಿವೇಶನ
ಬೆಳಗಾವಿ
ಚಿತ್ರಮಂದಿರಗಳಲ್ಲಿ
ಕನ್ನಡ
ಕಂಪು