ರೇವಣ್ಣ ಮನೆ ಕಟ್ಟಿದರೆ ನಮಗೇನಂತೆ?
ಬೆಂಗಳೂರು, ಜ. 17 : ಎಚ್. ಡಿ. ದೇವೇಗೌಡರ ಮಗ , ಮಾಜಿ ಸಚಿವ, ಹೊಳೆನರಸೀಪುರದ ಎಚ್.ಡಿ. ರೇವಣ್ಣ ಅವರು ಬೆಂಗಳೂರು ದಕ್ಷಿಣದಲ್ಲಿರುವ ಬಸವನಗುಡಿಯಲ್ಲಿ ಒಂದು ಬಂಗ್ಲೆ ಕಟ್ಟಿಸುತ್ತಿದ್ದಾರೆ. ಅವರ ಈ ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸಗಳಿಂದ ಸ್ಥಳೀಯ ನಾಗರಿಕರಿಗೆ ತುಂಬಾ ಅನಾನುಕೂಲ ಉಂಟಾಗುತ್ತಿದೆ. ಮೈತ್ರಿ ಸರಕಾರದಲ್ಲಿ ಲೋಕೋಪಯೋಗಿ ಸಚಿವರೂ ಆಗಿದ್ದ ರೇವಣ್ಣನವರು ಈಗ ಹೋಂ ಸ್ಕೂಲ್ ಸರ್ಕಲ್ ನಿರ್ಮಿಸುತ್ತಿರುವ ಸ್ವಂತ ಮನೆಯಿಂದಾಗಿ ಅನೇಕರಿಗೆ ಅನೇಕರೀತಿ ಕಿರುಕುಳ ಆಗುತ್ತಿದೆ ಎಂದು ವರದಿಯಾಗಿದೆ.
ರಸ್ತೆಯಲ್ಲಿ ಎಲ್ಲಂದರಲ್ಲಿ ಮರಳು ಹಾಕುವುದು, ಕಲ್ಲು ರಾಶಿ ಉದುರಿಸುವುದು. ಓಡಾಡುವರಿಗೆ ವೃಥಾ ತೊಂದರೆ. ವಾಹನ ಸಂಚಾರಿಗಳಿಗೆ ತಾಪತ್ರಯ. ಕಾವೇರಿ ಪೆಟ್ರೋಲ್ ಬಂಕಿನ ಕಡೆ ಹೋಗಿಬರುವವರಿಗೆ ಇದರ ತೊಂದರೆಯ ಅರಿವು ಹೆಚ್ಚು ತಟ್ಟಿರುತ್ತದೆ. ಅಕ್ಕಪಕ್ಕದ ಮನೆಯವರ ಗೋಳು ಹೇಳತೀರದು. ತೊಂದರೆಗಳ ಜತೆಗೆ ಜನರಿಗೆ ಏನೋ ಒಂದು ಬಗೆಯ ಭಯ.
ಮನೆ
ಕಟ್ಟುವುದಕ್ಕೆ
ಕಾರ್ಪೋರೇಷನ್
ವಿಧಿಸಿರುವ
ನಿಯಮಗಳನ್ನು
ಗಾಳಿಗೆ
ತೂರಲಾಗಿದೆ
ಎಂದೂ
ಆಪಾದಿಸಲಾಗಿದೆ.
ಅದರ
ಬಗ್ಗೆ
ವಿಚಾರಿಸಿದರೆ
ತಮಗೆ
ಮಾಹಿತಿ
ಇಲ್ಲ
ಎನ್ನುತ್ತಾರಂತೆ
ಟೌನ್
ಪ್ಲಾನಿಂಗ್
ಇಲಾಖೆಯವರು.
ಇನ್ನು
ಟ್ರಾಫಿಕ್
ಜಾಮು,
ಓಡಾಡುವವರಿಗೆ
ತೊಂದರೆ
ಬಗ್ಗೆ
ಪೊಲೀಸರು
ಏನು
ಹೇಳುತ್ತಾರೆ
ಎನ್ನುವುದನ್ನು
ತಿಳಿಯಲು
ಬೆಂಗಳೂರಿನಿಂದ
ಪ್ರಕಟವಾಗುವ
ಆಂಗ್ಲ
ದೈನಿಕ
ಮಿಡ್
ಡೇ
ಪ್ರಕಟಿಸಿರುವ
ವಿಸ್ತೃತ
ವರದಿಯನ್ನು
ನೀವು
ಓದಬೇಕು.
(ಅಲ್ಲಿಂದ
ಇಲ್ಲಿಂದ)
ಪತಿ,
ಪತ್ನಿಗಿಲ್ಲ
ಒಂದೆಡೆ
ಕೂರಂಗಿಲ್ಲ:
ಶೆಟ್ಟರ್