ಕರವೇಯಿಂದ ವಿಶ್ವ ಕನ್ನಡಿಗರ ಸಮಾವೇಶ
ಬೆಂಗಳೂರು, ಜ. 15 : ಕರ್ನಾಟಕ ರಕ್ಷಣಾ ವೇದಿಕೆ ಜ. 17 ಮತ್ತು 18 ರಂದು ಅರಮನೆ ಮೈದಾನದಲ್ಲಿ ವಿಶ್ವ ಕನ್ನಡಿಗರ ಸಮಾವೇಶವನ್ನು ಹಮ್ಮಿಕೊಂಡಿದೆ. ನಾಡು, ನುಡಿ, ಜಲ ಸೇರಿದಂತೆ ಕರ್ನಾಟಕ ಹಾಗೂ ಕನ್ನಡಿಗರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳತ್ತ ಬೆಳಕು ಚೆಲ್ಲುವುದು ಸಮಾವೇಶದ ಉದ್ದೇಶವಾಗಿದೆ.
ಮಠಾಧಿಪತಿಗಳು, ರಾಜಕಾರಣಿಗಳು, ಕಲಾವಿದರು ಸೇರಿದಂತೆ ನಾಡಿನ ಎಲ್ಲ ಭಾಗಗಳಿಂದ ಕರವೇ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ಹಲವು ಕನ್ನಡಪರ, ರೈತ ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರೂ ಕೈಜೋಡಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ, ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ದೆಹಲಿ, ಚೆನ್ನೈ, ಗೋವಾ, ದುಬೈ, ಸಿಂಗಾಪುರ, ಕೆನಡಾ, ಆಸ್ಟ್ರೇಲಿಯಾ, ನೆದರ್ ಲ್ಯಾಂಡ್, ಹಾಲೆಂಡ್ ಮತ್ತಿತರ ದೇಶಗಳ ಕನ್ನಡ ಸಂಘಟನೆಗಳ ಮುಖ್ಯಸ್ಥರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 42 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಅಂತಾರಾಜ್ಯ ವಲಸೆ ನಿಯಂತ್ರಣ, ಆಡಳಿತದಲ್ಲಿ ಕನ್ನಡ ಕಡ್ಡಾಯ, ನೆರೆ ರಾಜ್ಯ ನದಿ ನೀರು ಹಂಚಿಕೆ ತಗಾದೆ ಮತ್ತು ಗಡಿ ವಿವಾದಗಳು ಈ ನಿರ್ಣಯಗಳಲ್ಲಿವೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುವುದು. ಹಾಗೂ ಮುಂದಿನ ಸಮಾವೇಶಕ್ಕೆ ಮುನ್ನ ಈ ಎಲ್ಲ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವುದು ನಮ್ಮ ಉದ್ದೇಶ ಎಂದು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ತಿಳಿಸಿದ್ದಾರೆ.
ಸಾಧಕರಿಗೆ ಸನ್ಮಾನ
ಬಸವೇಶ್ವರ
ಪ್ರಶಸ್ತಿ
-ಸಾಲುಮರದ
ತಿಮ್ಮಕ್ಕ
ಕುವೆಂಪು
ಪ್ರಶಸ್ತಿ
-
ಡಾ
ಸಿ
ಪಿ
ಕೃಷ್ಣಕುಮಾರ್
ಡಾ
ರಾಜ್
ಕುಮಾರ್
ಪ್ರಶಸ್ತಿ
-
ಜಯಂತಿ
ಕೆ
ಶಾಮರಾವ್
ಪ್ರಶಸ್ತಿ
-
ವಿಶ್ವೇಶ್ವರ
ಭಟ್
ಎಸ್
ಕೆ
ಕರೀಂಖಾನ್
ಪ್ರಶಸ್ತಿ
-
ಡಾ
ಎಂ
ಎಸ್
ವಾಲಿ
ಶಾಂತವೇರಿ
ಗೋಪಾಲ್
ಗೌಡ
-
ಎಚ್
ಜಿ
ಗೋವಿಂದೇಗೌಡ
ಪ್ರೋ
ಎಂ
ಡಿ
ನಂಜುಂಜಸ್ವಾಮಿ
-
ಸಿದ್ದವೀರಪ್ಪ
ಈಚಗಟ್ಟಿ
(ದಟ್ಸ್ ಕನ್ನಡ ವಾರ್ತೆ)