ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೂಡಲಸಂಗಮದಲ್ಲಿ 'ಶರಣ ಮೇಳ '
ಕೂಡಲ ಸಂಗಮ, ಜ. 9 : 22ನೇ ಶರಣ ಮೇಳ ಜನವರಿ 11 ರಿಂದ 15ರ ವರೆಗೆ ಕೂಡಲಸಂಗಮದಲ್ಲಿ ನಡೆಯಲಿದೆ ಎಂದು ಶರಣ ಮೇಳ ಸಮಿತಿಯ ಅಧ್ಯಕ್ಷೆ ಮಾತೆ ಮಹಾದೇವಿ ತಿಳಿಸಿದರು. ಸುಮಾರು 3.5 ಲಕ್ಷ ಭಕ್ತಾದಿಗಳು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಜನವರಿ 11 ರಂದು ಧರ್ಮ ಚಿಂತನ ಗೋಷ್ಠಿ ಮೂಲಕ ಮೇಳ ಆರಂಭಗೊಳ್ಳಲಿದ್ದು, ಆನಂತರ 22ನೇ ವಾರ್ಷಿಕ ಬಸವದಳದ ಸಮ್ಮೇಳನ ಆಯೋಜಿಸಲಾಗಿದೆ. ಬಸವಜಯ ಮೃತ್ಯುಂಜಯ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ನಡೆಯಲಿದೆ. ಜನವರಿ 13 ರಿಂದ 15 ರ ವರೆಗೆ ಪ್ರಾರ್ಥನೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಮೇಳದಲ್ಲಿ ಹೊಸಮಠದ ಚಂದ್ರಶೇಖರ್ ಶಿವಯೋಗಿ ಸ್ವಾಮಿ, ಸಚಿವರಾದ ಶಿವರಾಜ್ ತಂಗಡಗಿ, ರೇವು ನಾಯಕ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, January 9, 2009, 15:41 [IST]